ದೆಹಲಿ : ತಾಲಿಬಾನ್ ವಶದಲ್ಲಿರುವ ಅಫ್ಘಾನಿಸ್ಥಾನವನ್ನು ಭಯೋತ್ಪಾದಕರ ನೆಲೆಯಾಗಲು ಬಿಡಬಾರದು ಎಂದು ಭಾರತ ಹಾಗೂ ಆಸ್ಟ್ರೇಲಿಯಾ ಜಂಟಿಯಾಗಿ ಪ್ರತಿಪಾದಿಸಿವೆ. ಉಭಯ ರಾಷ್ಟ್ರಗಳ ನಡುವೆ 2+2 ಶೃಂಗಸಭೆ ನಡೆದಿದ್ದು, ಇದರಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಕ್ಷಣ ಸಚಿವ ರಾಜನಾಥ್ ಸಿಂಗ್, ಆಸ್ಟ್ರೇಲಿಯಾದ ಮರೈಸ್ ಪೇಯ್ನ ಮತ್ತು ಪೀಟರ್ ಡಟ್ಟನ್ ಪಾಲ್ಗೊಂಡಿದ್ದರು.
ಈ ವೇಳೆ ಎರಡೂ ರಾಷ್ಟ್ರಗಳು ಜಂಟಿ ತೀರ್ಮಾನಗಳನ್ನು ಕೈಗೊಂಡಿದ್ದು, ಅಫ್ಘಾನಿಸ್ಥಾನದಲ್ಲಿ ಉಗ್ರ ಚಟುವಟಿಕೆಗಳು ನಡೆಯುವಂತಿಲ್ಲ. ಉಗ್ರ ನಿಯಂತ್ರಣಕ್ಕೆ ಜಾಗತಿಕ ಸಮುದಾಯ ಒಟ್ಟಾಗಿ ತೀರ್ಮಾನ ಕೈಗೊಳ್ಳಬೇಕು.ಇಂಡೋ- ಪೆಸಿಫಿಕ್ ಸಾಗರ ವಲಯದಲ್ಲಿ ಪರಸ್ಪರ ಸ್ವತಂತ್ರ, ಮುಕ್ತ, ಸಹಬಾಳ್ವೆಯಿಂದ ಕಾರ್ಯನಿರ್ವಹಿಸಬೇಕು. ಪರಸ್ಪರ ರಕ್ಷಣ, ವಾಣಿಜ್ಯ ಒಪ್ಪಂದ ಸೇರಿದಂತೆ ಎರಡೂ ದೇಶಗಳ ಅಭಿವೃದ್ಧಿಯತ್ತ ಗಮನಹರಿಸಬೇಕು ಎಂದಿದೆ. ಅಮೆರಿಕದ ಅವಳಿ ಕಟ್ಟಡದ ಮೇಲೆ ನಡೆದ ದಾಳಿಗೆ 20 ವರ್ಷವಾಗಿದ್ದು, ಮುಂದಿನ ದಿನಗಳಲ್ಲಿ ಭಯೋತ್ಪಾದಕರ ವಿರುದ್ಧ ಯಾವುದೇ ರಾಜಿ ಇಲ್ಲದೆ ಎದುರಿಸಬೇಕು ಎಂದು ತೀರ್ಮಾನಿಸಿದೆ.