News Karnataka Kannada
Monday, May 13 2024
ಕಾಸರಗೋಡು

ಕೋರೆ ಮಾಲಕರಿಂದ ಲಂಚ ಪಡೆದ ಆರೋಪದ ಹಿನ್ನಲೆ ಉಪ ಜಿಲ್ಲಾಧಿಕಾರಿ ಸಾಜಿದ್ಎಸ್.ಎ ಅಮಾನತು

Inauguration of administrative office of Federation of Bunts Associations at Mulki on April 5
Photo Credit :

ಕಾಸರಗೋಡು : ಕೋರೆ ಮಾಲಕರಿಂದ ಲಂಚ ಪಡೆದ ಆರೋಪದ ಹಿನ್ನಲೆಯಲ್ಲಿ ಕಾಸರಗೋಡು ಉಪ ಜಿಲ್ಲಾಧಿಕಾರಿ  ಸಾಜಿದ್ ಎಸ್.ಎ ನನ್ನು ಅಮಾನತುಗೊಳಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

ಎಂಡೋಸಲ್ಫಾನ್  ಸ್ಪೆಷಲ್ ಸೆಲ್ ನ  ಜಿಲ್ಲಾಧಿಕಾರಿಯಾಗಿರುವ ಸಾಜಿದ್ ನೆಟ್ಟಣಿಗೆ, ನಾಟೆಕಲ್ಲು ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ  ಕೋರೆ ಮಾಲಕರಿಂದ   ಲಂಚ ಪಡೆದಿರುವುದಾಗಿ ಕಂದಾಯ ಇಲಾಖೆಗೆ  ದೂರು ಲಭಿಸಿತ್ತು. ಈ ಹಿನ್ನಲೆಯಲ್ಲಿ ಅಮಾನತು ಗೊಳಿಸಲಾಗಿದೆ

ಉಪ ಜಿಲ್ಲಾಧಿಕಾರಿ ತನ್ನ ಅಧಿಕಾರಿಗಳನ್ನು ಬಳಸಿ  ಕೋರೆ  ಮಾಲಕರಿಂದ ಹಣ ಪಡೆದಿರುವುದು ಬೆಳಕಿಗೆ ಬಂದಿತ್ತು  ಕಳೆದ ಮಾರ್ಚ್ ೧ ರಂದು ಈ ಪ್ರದೇಶಕ್ಕೆ ತೆರಳಿರುವ ಬಗ್ಗೆಯೂ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿತ್ತು.

ಅಧಿಕೃತ  ವಾಹನ ಬಳಸಿ  ಉಪಜಿಲ್ಲಾಧಿಕಾರಿ  ಲಂಚ ಪಡೆದಿದ್ದರೆ ನ್ನಲಾಗಿದೆ. ಇದಲ್ಲದೆ  ಫೆಬ್ರವರಿ ೨೮ ಮತ್ತು   ಹಾಗೂ ಮಾರ್ಚ್  ೫ ರಂದು  ಕೋರೆ ಪ್ರದೇಶಕ್ಕೆ ತೆರಳಿರುವ  ದಾಖಲೆ  ಕಂದಾಯ ಇಲಾಖೆಗೆ ಲಭಿಸಿದೆ .

ಘಟನೆ ಬಗ್ಗೆ ಸಂಪೂರ್ಣ ತನಿಖೆಗೆ ಕಂದಾಯ  ಇಲಾಖೆ ಆದೇಶ ನೀಡಿದ್ದು , ಇದರಂತೆ ತನಿಖೆ ನಡೆಯುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು