ಕಾಸರಗೋಡು : ಕೋರೆ ಮಾಲಕರಿಂದ ಲಂಚ ಪಡೆದ ಆರೋಪದ ಹಿನ್ನಲೆಯಲ್ಲಿ ಕಾಸರಗೋಡು ಉಪ ಜಿಲ್ಲಾಧಿಕಾರಿ ಸಾಜಿದ್ ಎಸ್.ಎ ನನ್ನು ಅಮಾನತುಗೊಳಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಎಂಡೋಸಲ್ಫಾನ್ ಸ್ಪೆಷಲ್ ಸೆಲ್ ನ ಜಿಲ್ಲಾಧಿಕಾರಿಯಾಗಿರುವ ಸಾಜಿದ್ ನೆಟ್ಟಣಿಗೆ, ನಾಟೆಕಲ್ಲು ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಕೋರೆ ಮಾಲಕರಿಂದ ಲಂಚ ಪಡೆದಿರುವುದಾಗಿ ಕಂದಾಯ ಇಲಾಖೆಗೆ ದೂರು ಲಭಿಸಿತ್ತು. ಈ ಹಿನ್ನಲೆಯಲ್ಲಿ ಅಮಾನತು ಗೊಳಿಸಲಾಗಿದೆ
ಉಪ ಜಿಲ್ಲಾಧಿಕಾರಿ ತನ್ನ ಅಧಿಕಾರಿಗಳನ್ನು ಬಳಸಿ ಕೋರೆ ಮಾಲಕರಿಂದ ಹಣ ಪಡೆದಿರುವುದು ಬೆಳಕಿಗೆ ಬಂದಿತ್ತು ಕಳೆದ ಮಾರ್ಚ್ ೧ ರಂದು ಈ ಪ್ರದೇಶಕ್ಕೆ ತೆರಳಿರುವ ಬಗ್ಗೆಯೂ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿತ್ತು.
ಅಧಿಕೃತ ವಾಹನ ಬಳಸಿ ಉಪಜಿಲ್ಲಾಧಿಕಾರಿ ಲಂಚ ಪಡೆದಿದ್ದರೆ ನ್ನಲಾಗಿದೆ. ಇದಲ್ಲದೆ ಫೆಬ್ರವರಿ ೨೮ ಮತ್ತು ಹಾಗೂ ಮಾರ್ಚ್ ೫ ರಂದು ಕೋರೆ ಪ್ರದೇಶಕ್ಕೆ ತೆರಳಿರುವ ದಾಖಲೆ ಕಂದಾಯ ಇಲಾಖೆಗೆ ಲಭಿಸಿದೆ .
ಘಟನೆ ಬಗ್ಗೆ ಸಂಪೂರ್ಣ ತನಿಖೆಗೆ ಕಂದಾಯ ಇಲಾಖೆ ಆದೇಶ ನೀಡಿದ್ದು , ಇದರಂತೆ ತನಿಖೆ ನಡೆಯುತ್ತಿದೆ.