ಐಪಿಎಲ್ನ 17ನೇ ಆವೃತ್ತಿಯಲ್ಲಿ ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಯಶಸ್ವಿಯಾಗಿದೆ.ಈ ಯಶಸ್ಸಿನ ಖುಷಿಯಲ್ಲಿ ಗಂಭೀರ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
ಯಾರ ಆಲೋಚನೆಗಳು ಮತ್ತು ಹಾದಿಯು ಸತ್ಯವನ್ನು ಆಧರಿಸಿವೆಯೋ ಅವರ ರಥವನ್ನು ಶ್ರೀ ಕೃಷ್ಣ ಮುನ್ನಡೆಸುತ್ತಾನೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕೆಕೆಆರ್ ಗೆಲುವಿನ ಖುಷಿಯ ನಡುವೆ ಭಗವಂತನ ಕೃಪೆಯನ್ನು ಗೌತಮ್ ಗಂಭೀರ್ ನೆನೆದಿದ್ದಾರೆ.
ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಜರುಗಿದ ಅಂತಿಮ ಹಣಾಹಣಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ ಕೆಕೆಆರ್ ತಂಡ ಮೂರನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿತು. ವಿಶೇಷ ಎಂದರೆ ಕೆಕೆಆರ್ ತಂಡವು ಬರೋಬ್ಬರಿ ಒಂದು ದಶಕದ ಬಳಿಕ ಮತ್ತೊಮ್ಮೆ ಪ್ರಶಸ್ತಿ ಜಯಿಸಿದೆ.
Ad