ಜಾರ್ಖಂಡ್: ಎನ್ ಕೌಂಟರ್ ನಲ್ಲಿ ನಕ್ಸಲ್ ಒಬ್ಬನನ್ನು ಜಾರ್ಖಂಡ್ ನ ಗುದ್ರಿಯ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದ ಘಟನೆ ನಡೆದಿದೆ.
ಇಂದು ಮುಂಜಾನೆ ಸಿಆರ್ ಪಿಎಫ್ ಹಾಗೂ ನಕ್ಸಲ್ ನಡುವೆ ಗುಂಡಿನ ಚಕಮಕಿ ಆರಂಭಗೊಂಡಿದ್ದು ಈ ವೇಳೆ ನಕ್ಸಲ್ ಒಬ್ಬನನ್ನು ಪೊಲೀಸರು ಹೊಡೆದುರುಳಿಸಿದ್ದಾರೆ. ಮೃತ ನಕ್ಸಲ್ ನಿಂದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆಗಸ್ಟ್ 3ರಂದು ಛತ್ತೀಸ್ ಘರ್ ನಲ್ಲಿ ಮೂವರು ಮಹಿಳೆಯರು ಸೇರಿದಂತೆ 7 ನಕ್ಸಲರನ್ನು ಭದ್ರತಾ ಸಿಒಬ್ಬಂದಿ ಹೊಡೆದುರುಳಿಸಿದ್ದರು.