ಮೈಸೂರು: ಮಹದಾಯಿ ಯೋಜನೆ ಬಗ್ಗೆ ಹೋರಾಟ ಮಾಡುತ್ತಿರುವುದು ಬಿಜೆಪಿ ಪಕ್ಷ, ಇದಕ್ಕೆ ಕಲ್ಲು ಹಾಕುತ್ತಿರುವುದು ಸಿಎಂ ಸಿದ್ದರಾಮಯ್ಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮೈಸೂರಿನಲ್ಲಿ ಸಿಎಂ ವಿರುದ್ದ ವಾಗ್ದಾಳಿ ನಡೆಸಿದರು.
ಇಂದು ನಗರದ ಖಾಸಗಿ ಹೊಟೇಲ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಎಸ್ ಯಡಿಯೂರಪ್ಪ, ಮಹದಾಯಿ ಯೋಜನೆಗೆ ಹೋರಾಟ ನಡೆಸುತ್ತಿರುವುದು ಬಿಜೆಪಿ ಪಕ್ಷ, ಇದಕ್ಕೆ ಕಲ್ಲು ಹಾಕುತ್ತಿರುವುದು ಸಿಎಂ ಸಿದ್ದರಾಮಯ್ಯ ಎಂದು ವಾಗ್ದಾಳಿ ನಡೆಸಿದ ಯಡಿಯೂರಪ್ಪ, ಗೋವಾದ ಮುಖ್ಯಮಂತ್ರಿ ನೀರು ಬಿಡುತ್ತೇವೆ ಎಂದು ಹೇಳಿದ ತಕ್ಷಣ ಗೋವಾ ರಾಜ್ಯದ ಕಾಂಗ್ರೆಸ್ ಅಧ್ಯಕ್ಷ ಒಂದು ಹನಿ ನೀರನ್ನ ಬಿಡುವುದಿಲ್ಲ ಎಂದು ಹೇಳಿಕೆ ನೀಡಿದರು.
ಕಾಂಗ್ರೆಸ್ ಅವಿಗೆ ಗೊಂದಲ ಉಂಟು ಮಾಡುವುದು ಅವರ ಉದ್ದೇಶ. ಇದನ್ನ ಮಹಾದಾಯಿ ಹೋರಾಟಗಾರರು ಅರ್ಥ ಮಾಡಿಕೊಳ್ಳಬೇಕು. ನಾವು ಹೋರಾಟ ಮಾಡಬೇಕಾಗಿರುವುದು ಕಾಂಗ್ರೆಸ್ ವಿರುದ್ದ, ಸಿದ್ದರಾಮಯ್ಯನವರ ನಡವಳಿಕೆ ವಿರುದ್ದ ಎಂದರು ಕಿಡಿಕಾರಿದರು.
25ರ ಬಂದ್ ಗೆ ಬೆಂಬಲ ಇದೆ ಎಂದು ಹೇಳುವುದಿಲ್ಲ: ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ 25ರ ರಾಜ್ಯ ಬಂದ್ ಗೆ ನಾನು ಬೆಂಬಲ ಇದೆ ಎಂದು ಹೇಳುವುದಿಲ್ಲ. ಮಹದಾಯಿ ವಿಷಯಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಬಂದ್ ನ ಅಗತ್ಯವಿಲ್ಲ, ಬಂದ್ ನ ಅಗತ್ಯವಿರುವುದು ತೊಂದರೆಯಾಗುತ್ತಿರುವ ಭಾಗದಲ್ಲಿ ಮಾಡಬೇಕು ಹೊರತು, ಅದಕ್ಕೂ ಮೈಸೂರಿಗೆ ಏನು ಸಂಬಂಧ ಎಂದ ಪ್ರಶ್ನೆ ಮಾಡಿದರು.
25 ರಂದು ಮೈಸೂನಲ್ಲಿ ಖಂಡಿತವಾಗಿಯು ಅಮಿತ್ ಶಾ ಅವರ ರ್ಯಾಲಿ ನಡೆಯುತ್ತದೆ.