News Karnataka Kannada
Saturday, April 27 2024
ಮೈಸೂರು

ಮಹದಾಯಿ ಯೋಜನೆಗೆ ಸಿಎಂ ಕಲ್ಲು ಹಾಕುತ್ತಿದ್ದಾರೆ: ಬಿ.ಎಸ್ ವೈ ಆರೋಪ

Photo Credit :

ಮಹದಾಯಿ ಯೋಜನೆಗೆ ಸಿಎಂ ಕಲ್ಲು ಹಾಕುತ್ತಿದ್ದಾರೆ: ಬಿ.ಎಸ್ ವೈ ಆರೋಪ

ಮೈಸೂರು: ಮಹದಾಯಿ ಯೋಜನೆ ಬಗ್ಗೆ ಹೋರಾಟ ಮಾಡುತ್ತಿರುವುದು ಬಿಜೆಪಿ ಪಕ್ಷ, ಇದಕ್ಕೆ ಕಲ್ಲು ಹಾಕುತ್ತಿರುವುದು ಸಿಎಂ ಸಿದ್ದರಾಮಯ್ಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮೈಸೂರಿನಲ್ಲಿ ಸಿಎಂ ವಿರುದ್ದ ವಾಗ್ದಾಳಿ ನಡೆಸಿದರು.

ಇಂದು ನಗರದ ಖಾಸಗಿ ಹೊಟೇಲ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಎಸ್ ಯಡಿಯೂರಪ್ಪ, ಮಹದಾಯಿ ಯೋಜನೆಗೆ ಹೋರಾಟ ನಡೆಸುತ್ತಿರುವುದು ಬಿಜೆಪಿ ಪಕ್ಷ, ಇದಕ್ಕೆ ಕಲ್ಲು ಹಾಕುತ್ತಿರುವುದು ಸಿಎಂ ಸಿದ್ದರಾಮಯ್ಯ ಎಂದು ವಾಗ್ದಾಳಿ ನಡೆಸಿದ ಯಡಿಯೂರಪ್ಪ, ಗೋವಾದ ಮುಖ್ಯಮಂತ್ರಿ ನೀರು ಬಿಡುತ್ತೇವೆ ಎಂದು ಹೇಳಿದ ತಕ್ಷಣ ಗೋವಾ ರಾಜ್ಯದ ಕಾಂಗ್ರೆಸ್ ಅಧ್ಯಕ್ಷ ಒಂದು ಹನಿ ನೀರನ್ನ ಬಿಡುವುದಿಲ್ಲ ಎಂದು ಹೇಳಿಕೆ ನೀಡಿದರು.

ಕಾಂಗ್ರೆಸ್ ಅವಿಗೆ ಗೊಂದಲ ಉಂಟು ಮಾಡುವುದು ಅವರ ಉದ್ದೇಶ. ಇದನ್ನ ಮಹಾದಾಯಿ ಹೋರಾಟಗಾರರು ಅರ್ಥ ಮಾಡಿಕೊಳ್ಳಬೇಕು. ನಾವು ಹೋರಾಟ ಮಾಡಬೇಕಾಗಿರುವುದು ಕಾಂಗ್ರೆಸ್ ವಿರುದ್ದ, ಸಿದ್ದರಾಮಯ್ಯನವರ ನಡವಳಿಕೆ ವಿರುದ್ದ ಎಂದರು ಕಿಡಿಕಾರಿದರು.

25ರ ಬಂದ್ ಗೆ ಬೆಂಬಲ ಇದೆ ಎಂದು ಹೇಳುವುದಿಲ್ಲ: ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ 25ರ ರಾಜ್ಯ ಬಂದ್ ಗೆ ನಾನು ಬೆಂಬಲ ಇದೆ ಎಂದು ಹೇಳುವುದಿಲ್ಲ. ಮಹದಾಯಿ ವಿಷಯಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಬಂದ್ ನ ಅಗತ್ಯವಿಲ್ಲ, ಬಂದ್ ನ ಅಗತ್ಯವಿರುವುದು ತೊಂದರೆಯಾಗುತ್ತಿರುವ ಭಾಗದಲ್ಲಿ ಮಾಡಬೇಕು ಹೊರತು, ಅದಕ್ಕೂ ಮೈಸೂರಿಗೆ ಏನು ಸಂಬಂಧ ಎಂದ ಪ್ರಶ್ನೆ ಮಾಡಿದರು.

25 ರಂದು ಮೈಸೂನಲ್ಲಿ ಖಂಡಿತವಾಗಿಯು ಅಮಿತ್ ಶಾ ಅವರ ರ್ಯಾಲಿ ನಡೆಯುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
181

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು