ಮೈಸೂರು: ಕಾಡು ಹಂದಿ ಬೇಟೆಗೆ ತೆರಳಿದ ವ್ಯಕ್ತಿಗೆ ಆಕಸ್ಮಿಕವಾಗಿ ಕತ್ತಲೆಯಲ್ಲಿ ಗುಂಡು ತಗುಲಿ ಸಾವ್ನಪ್ಪಿರುವ ಘಟನೆ ಜಿಲ್ಲೆಯ ಹಾರೋಹಳ್ಳಿ ಅರಣ್ಯ ಪ್ರದೇಶದಲ್ಲಿ ನಿನ್ನೆ ರಾತ್ರಿ ನೆಡಿದಿದೆ.
ಘಟನೆಯ ವಿವರ: ಮೃತ ವ್ಯಕ್ತಿಯಲ್ಲಿ ಹೆಚ್.ಡಿ ಕೋಟೆ ತಾಲೂಕಿನ ಕಣಿಯನ ಹುಂಡಿಯ ಶಿವಣ್ಣೆಗೌಡ (55) ಎನ್ನಲಾಗಿದೆ. ಈತ ತನ್ನ ನಾಲ್ಕು ಜನ ಸ್ನೇಹಿತರೊಂದಿಗೆ ನಾಡ ಪಿಸ್ತೂಲ್ ನೊಂದಿಗೆ ಹಾರೋಹಳ್ಳಿ ಅರಣ್ಯ ಪ್ರದೇಶಕ್ಕೆ ಕಾಡು ಹಂದಿ ಬೇಟೆಗೆ ಹೋಗಿದ್ದರು. ಕತ್ತಲೆಯಲ್ಲಿ ಹಂದಿಗೆ ಹಾರಿಸಿದ ಗುಂಡು ಪಕ್ಕದ ಪೊದೆಯಲ್ಲಿ ಅವಿತಿದ್ದ ಶಿವಣ್ಣೆಗೌಡನಿಗೆ ತಗುಲಿದ್ದು, ಶಿವಣ್ಣೇಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಸಂಬಂಧ ಇಂದು ಸ್ಥಳಕ್ಕೆ ಹೆಚ್.ಡಿ ಕೋಟೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸ್ಥಳದಿಂದ ನಾಲ್ಕು ಜನ ಸ್ನೇಹಿತರು ಪರಾರಿಯಾಗಿದ್ದಾರೆ.