News Karnataka Kannada
Friday, May 10 2024
ಛತ್ತೀಸಗಢ

ಸೋಲುವ ಭಯದಿಂದ ಬಿಜೆಪಿ ಈರೀತಿ ಪದಗಳನ್ನು ಪ್ರಯೋಗಿಸುತ್ತಿದೆ: ಸಚಿನ್‌ ಪೈಲೆಟ್‌

ಬಿಜೆಪಿಯ ಹಿರಿಯ ನಾಯಕರು ಬಳಸುತ್ತಿರುವ ಭಾಷೆಯನ್ನು ನೋಡಿದರೆ ಅವರು ತಮ್ಮ ಗುರಿಯನ್ನು ತಲುಪುವಲ್ಲಿ ಸೋಲುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಕಾಂಗ್ರೆಸ್‌ ನಾಯಕ ಸಚಿನ್‌ ಪೈಲೆಟ್‌ ಹೇಳಿದರು.
Photo Credit : NewsKarnataka

ರಾಯ್ಪುರ್:‌ ಬಿಜೆಪಿಯ ಹಿರಿಯ ನಾಯಕರು ಬಳಸುತ್ತಿರುವ ಭಾಷೆಯನ್ನು ನೋಡಿದರೆ ಅವರು ತಮ್ಮ ಗುರಿಯನ್ನು ತಲುಪುವಲ್ಲಿ ಸೋಲುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಕಾಂಗ್ರೆಸ್‌ ನಾಯಕ ಸಚಿನ್‌ ಪೈಲೆಟ್‌ ಹೇಳಿದರು.

ʼಉತ್ತರ ಹಾಗು ದಕ್ಷಿಣದಲ್ಲಿ ಇಂಡಿಯಾ ಮೈತ್ರಿಕೂಟ ಉತ್ತಮ ಪ್ರದರ್ಶನ ತೋರುತ್ತಿದೆ. ಜೂ.೪ರಂದು ಮೈತ್ರಿಕೂಟ ಸರ್ಕಾರ ರಚಿಸಲಿದೆʼ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಎಲ್ಲಾ ಸಂಸ್ಥೆಗಳು ನಿಷ್ಪಕ್ಷವಾಗಿ ಕಾರ್ಯ ನಿರ್ವಹಿಸಬೇಕು. ತನಿಖೆಗಳು ದ್ವೇಷದ ಉದ್ದೇಶದಿಂದ ನಡೆಯಬಾರದುʼ ಎಂದರು.

ಕಾಂಗ್ರೆಸ್‌ ಪಕ್ಷ ಎಮ್.ಎಸ್.ಪಿ, ಮನ್ರೇಗಾ, ಮಹಿಳಾ ಸಶಕ್ತಿಕರಣದಂತಹ ವಿಚಾರಗಳ ಕುರಿತು ಮಾತಾಡುತ್ತಿದ್ದರೆ, ಬಿಜೆಪಿ ಮಾತ್ರ ಮಂದಿರ, ಮಸೀದಿ, ಮಂಗಳಸೂತ್ರ, ಹಿಂದು, ಮುಸ್ಲಿಂ ಇತ್ಯಾದಿ ವಿವಾದಿತ ವಿಷಯಗಳ ಬಗ್ಗೆ ಮಾತಾಡುತ್ತಿದೆ ಎಂದರು.

ಛತ್ತೀಸಘಡಕ್ಕೆ ಏ.೨೯ರಂದು ರಾಹುಲ್‌ ಗಾಂಧಿ ಬೇಟಿ ನೀಡಲಿದ್ದು, ಏ.೩೦ರಂದು ಮಲ್ಲಿಕಾರ್ಜುನ ಖರ್ಗೆ ಬರಲಿದ್ದಾರೆ. ಮೇ.೨ರಂದು ಪ್ರಯಾಂಕಾ ಗಾಂಧಿ ಕೂಡ ಪ್ರಚಾರದ ಭಾಗವಾಗಿ ಭೇಟಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು