ಕಾಸರಗೋಡು : ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಂದ ಎಡೆಬಿಡದೆ ಭಾರೀ ಮಳೆ ಸುರಿಯುತ್ತಿದ್ದು , ಹಲವೆಡೆ ಹಾನಿ ಉಂಟಾಗಿದೆ. ಮನೆ ಕುಸಿತ , ಗುಡ್ಡ ಕುಸಿತ ಉಂಟಾಗಿದ್ದು , ಕೃಷಿಗೂ ಹಾನಿ ಉಂಟಾಗಿದೆ. ನೀರ್ಚಾಲು ಸಮೀಪದ ಕಿಳಿಂಗಾರು ಬೇರಿಕೆಯ ದೇವಪ್ಪ ಮನೆ ಮಂಗಳವಾರ ಬೆಳಿಗ್ಗೆ ಕುಸಿದು ಬಿದ್ದಿದೆ. ಶಬ್ದ ಕೇಳಿ ಮನೆಯಲ್ಲಿದ್ದವರು ಹೊರ ಬಂದ ಹಿನ್ನಲೆಯಲ್ಲಿ ಅಪಾಯ ತಪ್ಪಿದೆ.
ಕೊನ್ನಕ್ಕಾಡ್ ಅಶೋಕಚಾಲ್ ನಲ್ಲಿ ರಸ್ತೆಗೆ ನೆರೆ ನೀರು ನುಗ್ಗಿ ದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಹಲವೆಡೆ ಗುಡ್ಡ ಕುಸಿದಿದ್ದು , ಮರಗಳು ಬಿದ್ದು ವಾಹನ ಸಂಚಾರಕ್ಕೂ ಅಡ್ಡಿ ಉಂಟಾಗಿದೆ .