ಕಾಸರಗೋಡು : ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ಬಾಲಕಿಯೋರ್ವಳು ಮೃತಪಟ್ಟ ದಾರುಣ ಘಟನೆ ನಗರ ಹೊರವಲಯದ ಚೆರ್ಕಳ ದಲ್ಲಿ ನಡೆದಿದೆ.
ಮಧೂರು ಅರಂತ್ತೋಡಿನ ಫಿರೋಜ್ – ತಾಹಿರಾ ದಂಪತಿ ಪುತ್ರ ಫಾತಿಮಾ ( 11) ಮೃತಪಟ್ಟ ಬಾಲಕಿ. ಚೆರ್ಕಳ ಬಂಬ್ರಾಣಿ ಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದಾಗ ಈ ಘಟನೆ ನಡೆದಿದೆ.
ಮಧೂರು ಅರಂತ್ತೋಡಿನ ಫಿರೋಜ್ – ತಾಹಿರಾ ದಂಪತಿ ಪುತ್ರ ಫಾತಿಮಾ ( 11) ಮೃತಪಟ್ಟ ಬಾಲಕಿ. ಚೆರ್ಕಳ ಬಂಬ್ರಾಣಿ ಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದಾಗ ಈ ಘಟನೆ ನಡೆದಿದೆ.
ಮನೆ ಸಮೀಪ ನಿರ್ಮಾಣ ಹಂತದಲ್ಲಿರುವ ಮನೆ ಪರಿಸರದಲ್ಲಿ ತೆಗೆಯಲಾಗಿದ್ದ ಹೊಂಡಕ್ಕೆ ಆಕ್ಮಸ್ಮಿಕವಾಗಿ ಬಿದ್ದು ಈ ದುರ್ಘಟನೆ ನಡೆದಿದೆ. ಎರಡು ದಿನಗಳಿಂದ ಮಳೆ ಸುರಿದಿದ್ದರಿಂದ ಈ ಹೊಂಡದಲ್ಲಿ ನೀರು ತುಂಬಿತ್ತು.
ಹೊಂಡಕ್ಕೆ ಬಿದ್ದಿದ್ದ ಫಾತಿಮಾ ಳನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ . ಈಕೆ ಕಾಸರಗೋಡು ಸರಕಾರಿ ಹಯರ್ ಸೆಕಂಡರಿ ಶಾಲಾ ಆರನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ವಿದ್ಯಾನಗರ ಠಾಣಾ ಪೊಲೀಸರು ಮಹಜರು ನಡೆಸಿದ್ದು , ಕಾಸರಗೋಡು ;ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಕೊಡಲಾಯಿತು.