ನಂಜನಗೂಡು: ನಗರದ ಶ್ರೀ ಕನಕಗಿರಿ ಕೆಂಡಗಣ್ಣೇಶ್ವರಸ್ವಾಮಿ ಮಠದ ಗದ್ದಿಗೆಯ ಬಳಿ ಸುಮಾರು ₹45 ಲಕ್ಷ ರೂ.ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಬಿ. ಹರ್ಷವರ್ಧನ್ ಭೂಮಿಪೂಜೆ ನೆರವೇರಿಸಿದೆನು.
ಮೈಸೂರು ಮಹಾರಾಜರಿಗೆ ರಾಜಶ್ರೀಗಳಾಗಿದ್ದ ಶ್ರೀ ಕನಕಗಿರಿ ಕೆಂಡಗಣ್ಣೆಶ್ವರ ಸ್ವಾಮಿಗಳವರ ಶ್ರೀ ಮಠದ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ ಎಂದು ನಾಲ್ಕು ವರ್ಷದ ಹಿಂದೆ ಹೇಳಿದ್ದೆ, ಅದನ್ನು ಈಗ ಕಾರ್ಯರೂಪಕ್ಕೆ ತಂದಂತಹ ಸಾರ್ಥಕ ಭಾವ ನನ್ನಲ್ಲಿ ಮೂಡಿದೆ. ಕೆಲವೇ ದಿನಗಳಲ್ಲಿ ಈ ಸ್ಥಳದಲ್ಲಿ ಸುತ್ತೂರು ಶ್ರೀಗಳ ದಿವ್ಯಸಾನಿಧ್ಯ ಹಾಗೂ ನಿಕಟಪೂವ೯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರ ಉಪಸ್ಥಿತಿಯಲ್ಲಿ ವಿಶ್ವಗುರು ಬಸವಣ್ಣನವರ ಸ್ಮಾರಕಕ್ಕೆ ಅಡಿಗಲ್ಲು ಹಾಕಲಾಗುವುದು ಎಂದು ನಂಜನಗೂಡು ಶಾಸಕ ಬಿ. ಹರ್ಷವರ್ದನ್ ತಿಳಿಸಿದರು.
ಇದೆ ಸಂದರ್ಭದಲ್ಲಿ ಮುಮ್ಮಡಿ ಷಡಕ್ಷರಿ ದೇಶಿಕೇಂದ್ರ ಸ್ವಾಮಿಗಳು, ಶಿವಮೂತಿ೯ ಶಿವಾಚಾಯ೯ ಸ್ವಾಮಿಗಳು, ನಗರಸಭಾ ಅಧ್ಯಕ್ಷರಾದ ಮಹದೇವಸ್ವಾಮಿ, ಹೊರಳವಾಡಿ ಮಹೇಶ್, ಎನ್.ಸಿ.ಬಸವಣ್ಣ, ವಿನಯ್ ಕುಮಾರ್, ಕೆಂಡಗಣ್ಣಸ್ವಾಮಿ, ಕಳಲೆ ಪ್ರಸಾದ್, ಗುರುಸ್ವಾಮಿ, ರೇವಣ್ಣ, ಜಗದೀಶ್ ಮುಂತಾದವರು ಉಪಸ್ಥಿತರಿದ್ದರು.