ಹಾಸನ: ಕಳೆದ ನಾಲ್ಕು ತಿಂಗಳಿನಿಂದ ಸಂಬಳ ಕೊಡದ ಕಾರಣ ನಾವು ಜೀವನ ನಿರ್ವಹಣೆ ಮಾಡುವುದೇ ಕಷ್ಟಕರವಾಗಿದ್ದು, ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಸಂಬಳ ಕೊಡುವಂತೆ ಆಗ್ರಹಿಸಿ ಕಸವಿಲೇವಾರಿ ವಾಹನ ಚಾಲಕರು ಹಾಗೂ ಸಹಾಯಕರು ಬುಧವಾರದಂದು ತಮ್ಮ ಕೆಲಸವನ್ನು ಸಥಗಿತಗೊಳಿಸಿ ಬೆಳ್ಳಂಬೆಳಿಗ್ಗೆ ಹಾಸನ ಕ್ಷೇತ್ರದ ಶಾಸಕರಾದ ಪ್ರೀತಂ ಜೆ. ಗೌಡರ ಮನೆಗೆ ಮುತ್ತಿಗೆ ಹಾಕಿ ಆಗ್ರಹಿಸಿದರು.
ಅಫೆ ವಾಹನ ಚಾಲಕರ ಸಂಘದ ವಿಶ್ವ ಮಾಧ್ಯಮದೊಂದಿಗೆ ಮಾತನಾಡಿ, ಟೆಂಡರ್ ಬೇಸಿಕ್ ಮೇಲೆ ಪ್ರತಿತಿಂಗಳು ನಮಗೆ ಸಂಬಳ ಕೊಡಬೇಕಾಗಿದ್ದು, ಕಳೆದ ನಾಲ್ಕು ತಿಂಗಳಿನಿಂದ ನಮಗೆ ಸಂಬಳ ಕೊಡುತ್ತಿಲ್ಲ. ನಾವು ಅಫೆ ವಾಹನ ಓಡಿಸಿ ಕಸವಿಲೇವಾರಿ ಮಾಡಿ ಬಂದ ಸಂಬಳದಲ್ಲಿ ಜೀವನ ಸಾಗಿಸಬೇಕು. ಬೆಳಿಗ್ಗೆ ೫ ಗಂಟೆಯಿಂದ ಮದ್ಯಾಹ್ನ ೨ ಗಂಟೆಯವರೆಗೂ ನಾವು ಕೆಲಸ ಮಾಡುತ್ತೇವೆ. ಸರಿಯಾಗಿ ಸಂಬಳ ಕೊಡದ ಕಾರಣ ನಗರಸಭೆ ಅಧ್ಯಕ್ಷರಿಗೆ ಹಾಗೂ ಅಧಿಕಾರಿಗಳಿಗೆ ಸಂಬಳ ಕೇಳಿದರೇ ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಹೇಳುತ್ತಾರೆ.
ನೀವು ನಮ್ಮನ್ನು ಕೇಳಿ ಕೆಲಸಕ್ಕೆ ಬಂದಿದ್ದೀರಾ ಎಂದು ನಮಗೆ ಉಢಾಪೆ ಉತ್ತರ ಕೊಡುತ್ತಾರೆ ಎಂದು ದೂರಿದರು. ನಾಲ್ಕು ತಿಂಗಳ ಕಾಲ ಸಂಬಳ ಕೊಡದಿದ್ದರೇ ನಾವು ಹೇಗೆ ಜೀವನ ಮಾಡುವುದು ಎಂಬುದು ನಮ್ಮ ಪ್ರಶ್ನೆಯಾಗಿದೆ. ನಮ್ಮ ಸಮಸ್ಯೆಯನ್ನು ಬಗೆಹರಿಸಿಕೊಡಲೆಂದು ಹಾಸನ ಕ್ಷೇತ್ರದ ಶಾಸಕರ ಮನೆ ಮುಂದೆ ಬಂದಿದ್ದೇವೆ. ನಾವು ಪ್ರತಿನಿತ್ಯ ಬೆಳಗಿನಿಂದಲೇ ಮನೆ ಮನೆಯ ಕಸವನ್ನು ಪಡೆದು ವಿಲೇವಾರಿ ಮಾಡುವ ಅಫೆ ವಾಹನದ ಚಾಲಕರು ಹಾಗೂ ಸಹಾಯಕರುಗಳಾಗಿ ಕೆಲಸ ಮಾಡುತ್ತಿದ್ದು. ಟೆಂಡರ್ ಗಳಿಗೆ ಪೋನ್ ಮಾಡಲು ಹೋದರೇ ಅವರಿಗೆ ಕರೆ ಮಾಡಬೇಡಿ ಎಂದು ಹೇಳುತ್ತಾರೆ.
ಇದುವರೆಗೂ ಗುತ್ತಿಗೆದಾರರು ಯಾರು ಎಂಬುದೇ ಗೊತ್ತಿಲ್ಲ. ವರ್ಷಕ್ಕೊಮ್ಮೆ ಬದಲಾವಣೆ ಆಗುತ್ತಾರೆ. ಇದುವರೆಗೂ ನಗರಸಭೆಯಿಂದಲೇ ಚೆಕ್ ಕೊಡಲಾಗುತ್ತಿತ್ತತು ಎಂದರು. ಹಾಸನ ನಗರಸಭೆಯ ೩೫ ವಾರ್ಡ್ಗಳ ಕಸ ವಿಲೇವಾರಿ ಮಾಡುವವರು ಎಲ್ಲಾ ಸೇರಿ ೨೦೦ ಜನರು ಕೆಲಸ ಮಾಡುತ್ತಿದ್ದು, ಇನ್ನು ಮುಂದೆ ನಮಗೆ ಪ್ರತಿ ತಿಂಗಳು ನಮಗೆ ಸಂಬಳ ಬರುವಾಗೆ ಮಾಡಿಕೊಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಸಂಬಳ ಬರುವವರೆಗೂ ನಾವು ಕೆಲಸ ಮಾಡುವುದಿಲ್ಲ ಎಂದು ಇದೆ ವೇಳೆ ಮಾಧ್ಯಮದ ಬಳಿ ತಮ್ಮ ಅಳಲು ತೋಡಿಕೊಂಡು ತುಂಬ ಸಮಯದವರೆಗೂ ಶಾಸಕರ ಮನೆ ಮುಂದೆ ಅಫೆ ವಾಹನ ಚಾಲಕರು ಮತ್ತು ಸಹಾಯಕರು ಕಾದು ನಿಂತರು.