ಮುಳಬಾಗಿಲು: ತಾಲ್ಲೂಕು ಬ್ರಾಹ್ಮಣ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಬಲ್ಲಂ ಶ್ರೀನಿವಾಸಮೂರ್ತಿ ಹಾಗೂ ಗೌರವಾಧ್ಯಕ್ಷರಾಗಿ ಹೆಚ್.ಎಸ್.ವೆಂಕಟೇಶ್ ರವರು ಅವಿರೋದವಾಗಿ ಆಯ್ಕೆಗೊಂಡಿದ್ದಾರೆ.
ನಗರದ ವಿಠಲಕುಂಟೆ ರಸ್ತೆಯಲ್ಲಿರುವ ಶ್ರೀ ವೇದಮಾತ ಗಾಯಿತ್ರಿ ಸಭಾಂಗಣದಲ್ಲಿ ಬ್ರಾಹ್ಮಣರ ಸಂಘದ ಅಧ್ಯಕ್ಷರಾದ ಮಲ್ಲನಾಯಕನಹಳ್ಳಿ ಶ್ರೀನಿವಾಸ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನೂತನ ಅಧ್ಯಕ್ಷರಾದ ಬಲ್ಲಂ ಶ್ರೀನಿವಾಸಮೂರ್ತಿ ಮಾತನಾಡಿ ತಾಲೂಕಿನ ಬ್ರಾಹ್ಮಣ ಅಭಿವೃದ್ಧಿಗೆ ಹಾಗೂ ಕಾಮಗಾರಿ ನಿಂತಿರುವ ಭವನವನ್ನು ಪೂರ್ಣಗೊಳಿಸಲು ಶ್ರಮಿಸುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ಉಪಾಧ್ಯಕ್ಷರಾಗಿ ವಲ್ಲಭಣ್ಣ, ಸುದರ್ಶನ್, ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಹರೀಶ್, ಸಹಕಾರ್ಯದರ್ಶಿಗಳಾಗಿ ಗಣೇಶ್ ಮತ್ತು ಗುಡಿಪಲ್ಲಿ ಸುರೇಶ್, ಖಜಾಂಚಿಯಾಗಿ ಕೆ.ಇ.ಬಿ ಸತ್ಯನಾರಾಯಣರಾವ್, ಖಾಯಂ ವಿಶೇಷ ಆಹ್ವಾನಿತರಾಗಿ ನಟರಾಜ್ ಅಯ್ಯರ್, ಎಂ.ಕೆ.ಶ್ರೀನಿವಾಸ್, ಆರ್.ಅಮೂಲ್ಯ, ಪತ್ರಿಕಾ ಸಲಹೆಗಾರರಾಗಿ ಜಿ.ವಿ.ಪುರುಷೊತ್ತಮ್ ರಾವ್, ಎಂ.ಪಿ.ನಾಗಭೂಷಣಾಚಾರ್, ಕಾನೂನು ಸಲಹೆಗಾರರಾಗಿ ವಕೀಲ ಚೇತನ್, ಆಂತರಿಕ ಪರಿಶೋಧಕರಾಗಿ ಕೇಶವ ಪ್ರಸಾದ್ ಆಯ್ಕೆಗೊಂಡರು.
ಈ ಸಂದರ್ಭದಲ್ಲಿ ಮಾವು ನಿಗಮ ಮಂಡಳಿಯ ಅಧ್ಯಕ್ಷರಾದ ಎಂ.ಕೆ.ವಾಸುದೇವ್ ಅವರನ್ನು ತಾಲೂಕು ವಿಪ್ರಬಾಂಧವರಿಂದ ಸನ್ಮಾನಿಸಲಾಯಿತು.
ಹಿರಿಯರಾದ ಉತ್ತನೂರು ವೆಂಕಟರಾವ್, ಹನುಮನಹಳ್ಳಿ ವಿಠ್ಠಲ್ರಾವ್, ಯು.ವಿ.ನಾರಾಯಣಾಚಾರ್, ಶಂಕರ್ ಸೇವಾ ಸಮಿತಿ ಅಧ್ಯಕ್ಷ ಸುಬ್ರಮಣ್ಯಂ, ದೇವರಾಯಸಮುದ್ರ ಸುಬ್ರಮಣಿ ಅಯ್ಯರ್, ಮುಖಂಡರಾದ ನರಸಿಂಹಾಚಾರ್, ಕನ್ನಡ ಪ್ರಕಾಶ್, ನಿತಿನ್, ಭರತ್ ಮತ್ತಿತರರು ಇದ್ದರು.