ಮಂಗಳೂರು: ಕ್ಷತ್ರಿಯ ಮರಾಠ ಜನಾಂಗವನ್ನು ಪ್ರವರ್ಗ 3(ಬಿ)ಯಿಂದ ಪ್ರವರ್ಗ 2(ಎ) ಗೆ ಸೇರಿಸುವಂತೆ ಆಗ್ರಹಿಸಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾಶಾಖೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಜಿಲ್ಲಾಧಿಕಾರಿ ಮೂಲಕ ಇತ್ತೀಚೆಗೆ ಮನವಿ ಸಲ್ಲಿಸಿದೆ. ರಾಜ್ಯದಲ್ಲಿ ಸುಮಾರು 40 ಲಕ್ಷ ಮರಾಠ ಜನಾಂಗದವರು ಇದ್ದಾರೆ. ಇವರಲ್ಲಿ 33 ಪಂಗಡಗಳಿವೆ. 27 ಪಂಗಡಗಳಿಗೆ ಈಗಾಗಲೇ 2(ಎ) ಸೌಲಭ್ಯ ಸಿಕ್ಕಿರುತ್ತದೆ ಮನವಿಯಲ್ಲಿ ತಿಳಿಸಲಾಗಿದೆ.
ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ರಾವ್ ಕರ್ಮೋರೆ, ಸ್ಥಾಪಕ ಅಧ್ಯಕ್ಷ ತಾನೋಜಿ ರಾವ್ ಪವಾರ್ ನಾಗೇಶ್ ಪಾಟೀಲ್ ಕೋಶಾಧಿಕಾರಿ, ಚಂದ್ರಶೇಖರ್ ಚಂದ್ರಮಾನ್, ಭಾಗ್ಯ ಸುಧಾಕರ ಸಿಂಧ್ಯಾ, ರಾಜ್ಯ ಸಂಘಟನಾ ಕಾರ್ಯದರ್ಶಿ ಸವಿತಾ ಎನ್.ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.