ಬೆಳ್ತಂಗಡಿ: ಇಲ್ಲಿನ ರತ್ನಮಾನಸ ವಸತಿ ನಿಲಯದಲ್ಲಿ ತೆನೆಹಬ್ಬ ಮತ್ತು ಹೊಸ ಅಕ್ಕಿ ಊಟ ಕಾರ್ಯಕ್ರಮ ನಡೆಯಿತು. ಉಜಿರೆ ಶ್ರೀ ಧ. ಮಂ. ವಸತಿ ಪಿ. ಯು. ಕಾಲೇಜಿನ ಉಪನ್ಯಾಸಕ ಸುನಿಲ್ ಪುರಾಣಿಕ್ ಹೊಸ ಅಕ್ಕಿ ಊಟ ಆಚರಣೆ,ವಿಶೇಷತೆ ಕುರಿತು ಮಾತನಾಡಿ ಇಂತಹ ಆಚರಣೆ ಮೂಲಕ ಹಿಂದಿನ ಆಚಾರ ವಿಚಾರಗಳ ಕುರಿತು ತಿಳಿಸಿ ಉಳಿಸುವ ಕಾರ್ಯ ಆಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಉಜಿರೆ ಶ್ರೀ ಧ. ಮಂ.ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕ ಮನಮೋಹನ್ ನಾಯಕ್, ಉಜಿರೆ ಸರಕಾರಿ ಆಸ್ಪತ್ರೆಯ ಹಿರಿಯ ಪರಿವೀಕ್ಷಣಾಧಿಕಾರಿ ಸೋಮನಾಥ್, ಪತ್ರಕರ್ತ ಜಾರಪ್ಪ ಪೂಜಾರಿ ಬೆಳಾಲು,ಮೈತ್ರಿ ವಸತಿ ನಿಲಯದ ಲಲಿತಾ ಮುದ್ರಾಡಿ, ಅಜ್ಜರಕಲ್ಲು ಕೃಷಿ ವಿಭಾಗದ ಮೋಹನ್ ಭಾಗವಹಿಸಿದ್ದರು.
ರತ್ನ ಮಾನಸದ ನಿಲಯ ಪಾಲಕ ಯತೀಶ್ ಬಳಂಜ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಿಬ್ಬಂದಿ ರವಿಚಂದ್ರ, ತ್ರಿಭುವನ್ ಉದಯರಾಜ್ ಇನ್ನಿತರು ಸಹಕರಿಸಿದರು. ಬೆಳಿಗ್ಗೆ ಗದ್ದೆಯಿಂದ ಭತ್ತದ ತೆನೆ ತಂದು ಪೂಜಿಸಲಾಯಿತು ಮಧ್ಯಾಹ್ನ ಹೊಸ ಅಕ್ಕಿಯ ಸಹ ಭೋಜನ ನಡೆಯಿತು.