News Karnataka Kannada
Sunday, April 28 2024
ಮಂಗಳೂರು

ಬೆಳ್ತಂಗಡಿ: ಉಜಿರೆ ರತ್ನ ಮಾನಸದಲ್ಲಿ ತೆನೆಹಬ್ಬ, ಹೊಸ ಅಕ್ಕಿ ಊಟ

Tenehabba at Ujire Ratna Manasa, new rice meal
Photo Credit : By Author

ಬೆಳ್ತಂಗಡಿ: ಇಲ್ಲಿನ ರತ್ನಮಾನಸ ವಸತಿ ನಿಲಯದಲ್ಲಿ ತೆನೆಹಬ್ಬ ಮತ್ತು ಹೊಸ ಅಕ್ಕಿ ಊಟ ಕಾರ್ಯಕ್ರಮ ನಡೆಯಿತು. ಉಜಿರೆ ಶ್ರೀ ಧ. ಮಂ. ವಸತಿ ಪಿ. ಯು. ಕಾಲೇಜಿನ ಉಪನ್ಯಾಸಕ ಸುನಿಲ್ ಪುರಾಣಿಕ್ ಹೊಸ ಅಕ್ಕಿ ಊಟ ಆಚರಣೆ,ವಿಶೇಷತೆ ಕುರಿತು ಮಾತನಾಡಿ ಇಂತಹ ಆಚರಣೆ ಮೂಲಕ ಹಿಂದಿನ ಆಚಾರ ವಿಚಾರಗಳ ಕುರಿತು ತಿಳಿಸಿ ಉಳಿಸುವ ಕಾರ್ಯ ಆಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಉಜಿರೆ ಶ್ರೀ ಧ. ಮಂ.ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕ ಮನಮೋಹನ್ ನಾಯಕ್, ಉಜಿರೆ ಸರಕಾರಿ ಆಸ್ಪತ್ರೆಯ ಹಿರಿಯ ಪರಿವೀಕ್ಷಣಾಧಿಕಾರಿ ಸೋಮನಾಥ್, ಪತ್ರಕರ್ತ ಜಾರಪ್ಪ ಪೂಜಾರಿ ಬೆಳಾಲು,ಮೈತ್ರಿ ವಸತಿ ನಿಲಯದ ಲಲಿತಾ ಮುದ್ರಾಡಿ, ಅಜ್ಜರಕಲ್ಲು ಕೃಷಿ ವಿಭಾಗದ ಮೋಹನ್ ಭಾಗವಹಿಸಿದ್ದರು.

ರತ್ನ ಮಾನಸದ ನಿಲಯ ಪಾಲಕ ಯತೀಶ್ ಬಳಂಜ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಿಬ್ಬಂದಿ ರವಿಚಂದ್ರ, ತ್ರಿಭುವನ್ ಉದಯರಾಜ್ ಇನ್ನಿತರು ಸಹಕರಿಸಿದರು. ಬೆಳಿಗ್ಗೆ ಗದ್ದೆಯಿಂದ ಭತ್ತದ ತೆನೆ ತಂದು ಪೂಜಿಸಲಾಯಿತು ಮಧ್ಯಾಹ್ನ ಹೊಸ ಅಕ್ಕಿಯ ಸಹ ಭೋಜನ ನಡೆಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು