ಮಂಗಳೂರು: ನಿಟ್ಟೆ ಇನ್ ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ನ ಸಂಶೋಧನಾ ಕೋಶ ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗ, ನಿಮ್ಹಾನ್ಸ್, ಬೆಂಗಳೂರು ಇದರ ಸಹಯೋಗದೊಂದಿಗೆ ವಿಶ್ವ ಆತ್ಮಹತ್ಯೆ ತಡೆ ದಿನದ ನಿಮಿತ್ತ ‘ಆತ್ಮಹತ್ಯೆ ತಡೆಗಟ್ಟುವಲ್ಲಿ ಮಾಧ್ಯಮ ಜವಾಬ್ದಾರಿ’ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು 6 ಸೆಪ್ಟೆಂಬರ್, 2022 ಬೆಳಿಗ್ಗೆ 10:30 ಕ್ಕೆ ಪನ್ನೀರ್ ಆಡಿಟೋರಿಯಂ ನಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಪಿಎಚ್.ಡಿ ವಿದ್ವಾಂಸರು, ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗ, ನಿಮ್ಹಾನ್ಸ್, ಬೆಂಗಳೂರಿನ ಲಕ್ಷ್ಮೀ ವಿಮಲಾ ಹಾಗೂ ಭರತ್ ಭಾಗವಹಿಸಲಿದ್ದಾರೆ.
ಗೌರವಾನ್ವಿತ ಅತಿಥಿಯಾಗಿ ಸೀನಿಯರ್ ರೆಸಿಡೆಂಟ್, ಮನೋವೈದ್ಯಶಾಸ್ತ್ರ ವಿಭಾಗ, ಕೆ.ಎಸ್.ಹೆಗ್ಡೆ ಚಾರಿಟೇಬಲ್ ಹಾಸ್ಪಿಟಲ್ ಡಾ.ಅಂಕಿತಾ ಶೆಣೈ ಭಾಗವಹಿಸಲಿದ್ದಾರೆ.