ಬಂಟ್ವಾಳ: ರಿಕ್ಷಾ ಚಾಲಕರ ಮಾಲಕರ ಭಾರತೀಯ ಮಜ್ದೂರ್ ಸಂಘ, ಬಿ.ಎಂ.ಎಸ್ ವತಿಯಿಂದ ನಾಲ್ಕನೇ ವರ್ಷದ ಪಾದಯಾತ್ರೆಗೆ ಬಿಸಿರೋಡಿನ ರಕ್ತೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಚಾಲನೆ ನೀಡಲಾಯಿತು.
ಬಿಸಿರೋಡಿನಿಂದ ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಿ ದೇವಸ್ಥಾನಕ್ಕೆ ಸುಮಾರು 38 ಜನ ರಿಕ್ಷಾ ಚಾಲಕರು ಪಾದಯಾತ್ರೆ ಕೈಗೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ರಿಕ್ಷಾ ಚಾಲಕರು ಪಾದಾಯಾತ್ರೆ ಮಾಡುತ್ತಿದ್ದು, ಇಂದು ಸಂಜೆ 5.30 ರ ವೇಳೆ ಬಿಸಿರೋಡಿನ ರಕ್ತೇಶ್ಬರಿ ದೇವಲದ ಮುಂಭಾಗದಿಂದ ಹೊರಟು ಪೊಳಲಿ ದೇವಸ್ಥಾನದಲ್ಲಿ ರಾತ್ರಿ ಉಪಹಾರ ಮುಗಿಸಿ ಬಳಿಕ ಬರಿಗಾಲಿನಲ್ಲಿ ಪಾದಾಯಾತ್ರೆಯ ಮೂಲಕ ಕಟೀಲು ಕ್ಷೇತ್ರ ತಲುಪಲಿದ್ದಾರೆ.
ಬಿಸಿರೋಡಿನಿಂದ ಭಾರತೀಯ ಮಜ್ದೂರ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ್ ಕುಮಾರ್ ಮಣಿಹಳ್ಳ ಅವರ ನೇತೃತ್ವದ ಲ್ಲಿ ಪಾದಾಯಾತ್ರಿಗಳನ್ನು ಬೀಳ್ಕೊಡಲಾಯಿತು. ಮೋಟಾರ್ ಮತ್ತು ಮಜ್ದೂರ್ ಸಂಘದ ಉಪಾಧ್ಯಕ್ಷ ನಾರಾಯಣ ಪೂಜಾರಿ ಅವರ ನೇತೃತ್ವದ ಲ್ಲಿ ಪಾದಾಯಾತ್ರೆ ಹಮ್ಮಿಕೊಳ್ಳಲಾಗಿದೆ.