News Karnataka Kannada
Saturday, April 27 2024
ಕರಾವಳಿ

ಬೆಳ್ತಂಗಡಿ ಆಸುಪಾಸು ತಂಪೆರದ ಮಳೆ, ಕೃಷಿಕರಿಗೆ ಕೊಂಚ ಸಮಾಧಾನ

Belthangadi is a relief for the farmers due to moderate rains
Photo Credit : News Kannada

ಬೆಳ್ತಂಗಡಿ:  ಕಳೆದ ಹಲವು ದಿನಗಳಿಂದ ಬಿಸಿಲಿನ ಬೇಗೆಗೆ ಬಸವಳಿದಿದ್ದ ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಲಾಯಿಲ, ದಿಡುಪೆ, ನಡ,ಕಲ್ಮಂಜ, ಚಿಬಿದ್ರೆ, ಚಾರ್ಮಾಡಿ, ಕಡಿರುದ್ಯಾವರ ಮೊದಲಾದ ಗ್ರಾಮಗಳ ಜನತೆಗೆ ಮಂಗಳವಾರ ಸುರಿದ ಸಾಮಾನ್ಯ ಮಳೆ ಒಂದಿಷ್ಟು ತಂಪೆರೆಯಿತು.

ಸಂಜೆ 5ರ ಹೊತ್ತಿಗೆ ಆರಂಭವಾದ ಮಳೆ ಸುಮಾರು ಅರ್ಧ ಗಂಟೆ ಕಾಲ ಸಾಮಾನ್ಯವಾಗಿ ಸುರಿಯಿತು.ಉಳಿದ ಕೆಲವು‌ ಗ್ರಾಮಗಳಲ್ಲಿ ತುಂತುರು ಮಳೆ ಸುರಿದಿದೆ. ಏ.7ರಂದು ತಾಲೂಕಿನ ಹಲವೆಡೆ ಗಾಳಿ, ಆಲಿಕಲ್ಲು ಸಹಿತ ಉತ್ತಮ ಮಳೆಯಾಗಿತ್ತು.ಮತ್ತೆ 18ದಿನಗಳ ಬಳಿಕ ಮಂಗಳವಾರ ಮಳೆ ಸುರಿದಿದೆ.

ಈಗಾಗಲೇ ತಾಲೂಕಿನ ಹಲವೆಡೆ ನೀರಿನ ತೊಂದರೆ ಕಂಡು ಬಂದಿದ್ದು ಜನತೆಗೆ ಸಮಸ್ಯೆ ಉಂಟಾಗಿತ್ತು. ನದಿ, ಕೆರೆ ಬತ್ತಿರುವ ಕಾರಣ ಹಲವು ಕೃಷಿ ತೋಟಗಳಿಗೂ ನೀರಾವರಿ ವ್ಯವಸ್ಥೆ ಇಲ್ಲದಾಗಿದೆ. ಮಂಗಳವಾರ ಕೆಲವೆಡೆ ಸುರಿದ ಮಳೆ ಜನರಲ್ಲಿ ಕೊಂಚ ಸಮಾಧಾನ ಮೂಡಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು