ಮಂಗಳೂರು: ಕಾಂಗ್ರೆಸ್ ಪಕ್ಷದ ನಾಲ್ಕನೇ ಪಟ್ಟಿ ಬಿಡುಗಡೆಗೊಂಡಿದ್ದು, ಈ ಪಟ್ಟಿಯಲ್ಲಿಯೂ ಪುಲಕೇಶಿ ನಗರ ಹಾಗೂ ಮಂಗಳೂರು ಉತ್ತರಕ್ಕೆ ಅಭ್ಯರ್ಥಿಗಳ ಘೋಷಣೆ ಮಾಡಿಲ್ಲ.
ಉಳಿದಂತೆ ಹುಬ್ಬಳ್ಳಿ ಧಾರವಾಡ ಪಶ್ಚಿಮಕ್ಕೆ ದೀಪಕ್ ಚಿಂಚೊರೆ, ಚಿಕ್ಕಮಗಳೂರಿಗೆ ಎಚ್.ಡಿ. ತಮ್ಮಯ್ಯ, ಲಿಂಗಸೂರು ಕ್ಷೇತ್ರಕ್ಕೆ ದುರ್ಗಪ್ಪ ಹೊಲಗೇರಿ, ಹುಬ್ಬಳ್ಳಿ ಧಾರವಾಡ ಸೆಂಟ್ರಲ್: ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡಲಾಗಿದೆ. ಹರಿಹರದಿಂದ ನಂದಗಾವಿ ಶ್ರೀನಿವಾಸ್, ಶ್ರವಣಬೆಳಗೊಳದಿಂದ ಎಂ.ಎ ಗೋಪಾಲಸ್ವಾಮಿ ಅವರಿಗೆ ಟಿಕೆಟ್ ನೀಡಲಾಗಿದೆ.