ಕಾಸರಗೋಡು: ನೆಕ್ರಾಜೆ ಚೆಡೆಕಲ್ ಉದ್ದಂತೋಡು ತರವಾಡು ಚಾಮುಂಡಿ ದೈವಸ್ಥಾನದ ಬೀಗ ಮುರಿದು ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟ೦ತೆ ಆರೋಪಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕೊಲ್ಲ೦ನ ಬಾಬು ಕುರ್ಯಕೋಸ್ ( 52) ಎಂದು ಗುರುತಿಸಲಾಗಿದೆ. ಜನವರಿ 17 ರಂದು ರಾತ್ರಿ ದೈವಸ್ಥಾನದಲ್ಲಿ ಕಳವು ನಡೆದಿತ್ತು. ದೈವಕ್ಕೆ ಅರ್ಪಿಸಲಾದ ಅರ್ಧ ಪವನ್ ಚಿನ್ನಾಭರಣ, ಬೆಳ್ಳಿ ಹಾಗೂ 40 ಸಾವಿರದಷ್ಟು ನಗದನ್ನು ಕಳವುಗೈಯಲಾಗಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಕುರ್ಯಕೊಸ್ ನ ಬೆರಳಚ್ಚು ಲಭಿಸಿತ್ತು. ಆದರೆ ಈತ ತಲೆಮರೆಸಿಕೊಂಡಿದ್ದನು. ಈ ಹಿಂದೆ ಜಿಲ್ಲೆಯಲ್ಲಿ ನಡೆದ ಹಲವು ಪ್ರಕರಣಗಳಲ್ಲಿ ಈತ ಶಾಮಿಲಾಗಿದ್ದು, ಇದರಿಂದ ಬೆರಳಚ್ಚು ಈತನ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಈ ನಡುವೆ ಈತ ಕೋಜಿಕ್ಕೋಡ್ ನಲ್ಲಿರುವ ಬಗ್ಗೆ ಲಭಿಸಿದ ಬದಿಯಡ್ಕ ಪೊಲೀಸರು ಕೋಜಿಕ್ಕೋಡ್ ಪೊಲೀಸರ ನೆರವಿನಿಂದ ಬಂಧಿಸಲಾಯಿತು.