ಪುತ್ತೂರು: ಪೂರ್ವದ್ವೇಷದಿಂದ ಪರಸ್ಪರ ಹಡೆದಾಟ ನಡೆಸಿ ದೊಣ್ಣೆಯೇಟಿನಿಂದ ಓರ್ವ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪಾಂಬಾರು ಕಾಲೋನಿಯಲ್ಲಿ ಮಂಗಳವಾರ ತಡ ರಾತ್ರಿ ನಡೆದಿದೆ.
ಕೊಳ್ತಿಗೆ ಪಾಂಬಾರು ನಿವಾಸಿ ವೈತ್ಲಿಂಗಮ್ ಪುತ್ರ ಕೆ.ಎಫ್.ಡಿ.ಸಿ ರಬ್ಬರ್ ಟ್ಯಾಪರ್ ಚೆಲುವ ಕುಮಾರ್(48)ರವರು ಮೃತಪಟ್ಟವರು. ಪಾಂಬಾರು ರಬ್ಬರ್ ಟ್ಯಾಪರ್ ಕಾಲೋನಿಯಲ್ಲಿ ಸ್ಥಳೀಯ ನಿವಾಸಿ ಪಾಂಬರು ರಾಧಾಕೃಷ್ಣನ್ ಪುತ್ರ ಕೂಲಿ ಕಾರ್ಮಿಕ ಗಗನ್(23ವ) ಮತ್ತು ಚೆಲುವ ಕುಮಾರ್ ರವರಲ್ಲಿ ಪೂರ್ವ ದ್ವೇಷದ ಕಾರಣದಿಂದಾಗಿ ಪರಸ್ಪರ ಹಲ್ಲೆ ನಡೆದಿತ್ತು. ಘಟನೆಯಿಂದಾಗಿ ಗಗನ್ ದೊಣ್ಣೆಯಿಂದ ಚೆಲುವ ಕುಮಾರ್ ನ ತಲೆಗೆ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡ ಅವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಹಲ್ಲೆ ಸಂದರ್ಭದಲ್ಲಿ ಚೆಲುವ ಕುಮಾರ್ ರಬ್ಬರ್ ಟ್ಯಾಪಿಂಗ್ ಕತ್ತಿಯಿಂದ ಗಗನ್ ಗೆ ತಿವಿದಿದ್ದಾರೆ. ತೀವ್ರ ಗಾಯಗೊಂಡ ಗಗನ್ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಎ.ಎಸ್ಪಿ ರಿಷ್ಯಂತ್, ಸಂಪ್ಯ ಎಸ್.ಐ ರವಿ. ಎ.ಎಸ್.ಐ ಚೆಲುವಯ್ಯರವರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.