ಮೈಸೂರು: ದೇವರಚಿತ್ರ ಬರೆಯುವ ಹುಚ್ಚು ಹಿಡಿಸಿಕೊಂಡವ ಅರೆ ಹುಚ್ಚಾನಾಗಿ ಕಳೆದ 10 ವರ್ಷಗಳಿಂದ ಬೆತ್ತಲಾಗಿ ಕೊಠಡಿಯಲ್ಲಿ ಬಂಧಿಯಾಗಿರುವ ಅಮಾನವೀಯ ಘಟನೆಯೊಂದು ನಂಜನಗೂಡು ತಾಲೂಕಿನ ಕುಗ್ರಾಮ ಹುರದಲ್ಲಿ ಬೆಳಕಿಗೆ ಬಂದಿದೆ.
10 ವರ್ಷದ ಹಿಂದೆ ಹೀಗಿದ್ದ..
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುರ ಗ್ರಾಮದ ರಾಜಶೆಟ್ಟಿ ನಂಜಮ್ಮ ದಂಪತಿಯ ಮೂರು ಮಕ್ಕಳಲ್ಲಿ ಒಬ್ಬನಾದ ಕುಮಾರಸ್ವಾಮಿ(26). ಬಾಲ್ಯದಲ್ಲಿ ಕುಳಿತಲ್ಲಿ ನಿಂತಲ್ಲಿ ಗೋಡೆ ಮೇಲೆ ಕಾಗದದ ಮೇಲೆ ದೇವರ ಚಿತ್ರಗಳನ್ನು ಬಿಡಿಸಿ ಜನರಿಗೆ ತೋರಿಸುತ್ತಿದ್ದನು. ಜನರು ಸಹ ಈತನ ಚಿತ್ರದ ಹುಚ್ಚಾಟ ಕಂಡು ಈತನನ್ನು ಹುಚ್ಚನೆಂದೆ ಮಾತಿನಲ್ಲಿ ಅಣಕಿಸುತ್ತಿದ್ದರು. ಆದರೆ ದುರಾದೃಷ್ಟವಶಾತ್ 10 ವರ್ಷದ ಹಿಂದೆ ಅದೊಂದು ಅಮಾವ್ಯಾಸೆಯಂದು ಹುಚ್ಚನಂತೆ ಕಿರುಚಾಡುತ್ತ ಬಟ್ಟೆ ಹರಿದುಕೊಂಡು ಮನೆ ಹೊಕ್ಕವ ಮರಳಿ ಹೊರಗೆ ಬಾರಲೇ ಇಲ್ಲ. ತಂದೆಯನ್ನು ಕಳೆದುಕೊಂಡಿದ್ದ ಕುಮಾರಸ್ವಾಮಿಯ ಹುಚ್ಚಾಟ ಕಂಡ ಹೆತ್ತ ನಂಜಮ್ಮ ಆತನನ್ನು ಕರೆದೊಯ್ಯದ ದೇವಸ್ಥಾನವಿಲ್ಲ. ಈತನಿಗಾಗಿ ಹರಕೆ ಕಟ್ಟಿಕೊಳ್ಳದ ದೇವರಿಲ್ಲ. ಆದರೂ ಸಹ ಈತನ ಸ್ಥಿತಿ ಇಂದಿಗೂ ಕಡಿಮೆ ಆಗಿಯೇ ಇಲ್ಲ.
ಸದ್ಯಕ್ಕೆ ಗೋಡೆಯ ಮಧ್ಯೆ ಒಂದು ಕೋಣೆಯಲ್ಲಿ ಕಟ್ಟಿಹಾಕಿದ ಸ್ಥಿತಿಯಲ್ಲಿ ಬಟ್ಟೆ ಇಲ್ಲದೆ ಬೆತ್ತಲಾಗಿರುವ ಕುಮಾರಸ್ವಾಮಿ ನಿತ್ಯಕರ್ಮಗಳನ್ನು ಅಲ್ಲಿಯೇ ಮುಗಿಸುತ್ತಾನೆ. ತನ್ನ ತಾಯಿ ಹೊರತಾಗಿ ಬೇರಾರನ್ನು ಹತ್ತಿರಕ್ಕೆ ಸೇರಿಸುವುದಿಲ್ಲ. ಮೂರು ಹೊತ್ತು ಊಟ ಹಾಕು ಈತನಿಗೆ ಸ್ನಾನ ಬಟ್ಟೆಯ ಅವಶ್ಯಕತೆಯೇ ಇಲ್ಲದಂತಾಗಿದೆ. ಬೆಳಕಿನ ಮುಖವನ್ನೇ ಕಾಣದ ಕುಮಾರಸ್ವಾಮಿ ಇಂದಿನ ಪರಿಸ್ಥಿತಿ ಕಂಡು ದಿನನಿತ್ಯ ದೇವರನ್ನೇ ಶಪಿಸುತ್ತಿರುವ ತಾಯಿ ನಂಜಮ್ಮ ತನ್ನ ಮಗನ ವನವಾಸ ಮುಗಿಯುವುದು ಯಾವಾಗ ಎಂದು ಬೇಡಿಕೊಳ್ಳುತ್ತಿದ್ದಾಳೆ. ಆದ್ರೆ 10 ವರ್ಷದಿಂದ ಕೋಣೆಯಲ್ಲೇ ಇದ್ದು ನಿಜಕ್ಕೂ ಹುಚ್ಚನಾಗಿರುವ ಕುಮಾರಸ್ವಾಮಿ ಹುಚ್ಚನಾದದಕ್ಕೂ ಏಕೆ..? ದೇವರ ಮೇಲಿನ ಅಪಾರ ಭಕ್ತಿಯೇ ಕಲೆ ರೂಪದಲ್ಲಿ ಹೊರತರುತ್ತಿದ್ದ ಆತನ ಕಲೆಯೇ ಆತನಿಗೆ ಮುಳುವಾಗಿ ಈ ಸ್ಥಿತಿ ತಂದಿತೇ ಎಂಬುದೇ ಪ್ರಶ್ನೆಯಾಗಿದೆ.
ಅಂದೊಮ್ಮೆ ಹುಚ್ಚನಂತಾದವ ಇಂದಿಗೂ ಹಾಗೆಯೇ ಇದ್ದಾನೆ. ದುಡಿದು ನನ್ನನ್ನು ಮನೆಯನ್ನು ನಡೆಸಬೇಕಿದ್ದವ ನಾಲ್ಕು ಕೋಣೆಯಲ್ಲಿರುವುದನ್ನು ನೋಡಿದರೆ ಆತನಿಗೆ ದೇವರ ಶಾಪವೇ ಇರಬೇಕೆಂದು ಕೊಂಡು ಊಟ ಹಾಕುತ್ತಿದ್ದೇನೆ ಎಂಬುದು ತಾಯಿಯ ನೋವಿನ ನುಡಿಯಾಗಿದೆ. ಆದ್ರೆ ಕಳೆದ 10 ವರ್ಷದಿಂದ ಮಗನಿಗಾಗಿ ನೂರಾರು ದೇವಾಲಯ ಸುತ್ತಿರುವ ನಂಜಮ್ಮ ಒಮ್ಮೆಯೂ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಕೊಡಿಸದ ಕುಟುಂಬ ತನ್ನ ಅಸಹಾಯಕತೆಯಲ್ಲೇ ದಿನದೂಡುತ್ತಿರುವುದು ವಿಪರ್ಯಾಸ ಅನ್ನಬಹುದು.
ನೆರವಿನ ನಿರೀಕ್ಷೆಯಲ್ಲಿ….
ಮದುವೆಗೆ ಬಂದ ಮಗನ ಈ ಸ್ಥಿತಿಯನ್ನು ಕಂಡು ಅಸಹಾಯಕರಾಗಿರುವ ತಾಯಿ ಯಾವುದಾದರು ಆಸ್ಪತ್ರೆಗೆ ಸೇರಿಸಲು ಶಕ್ತಿಯಿಲ್ಲ. ಯಾರಾದರೂ ಸಹಾಯ ಮಾಡಿ ಆಸ್ಪತ್ರೆಗೆ ಸೇರಿಸಿ ಎಂದು ಮಗನನ್ನು ಸರಿ ಪಡಿಸಿ ಎಂದು ಆರೋಗ್ಯ ಸಚಿವರಲ್ಲಿ ಮನವಿ ಮಾಡಿದ್ದಾರೆ.