News Karnataka Kannada
Saturday, April 27 2024
ಕ್ರೈಮ್

ಲೈಂಗಿಕ ದೌರ್ಜನ್ಯ ಎಸಗಿದವನನ್ನು ಇರಿದು ಕೊಂದು ಬೆಂಕಿ ಹಚ್ಚಿದ ಯುವಕರು

ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಸಂಬಂಧಿಯೊಬ್ಬ 11 ವರ್ಷದ ಬಾಲಕಿಯ ಶಿರಚ್ಛೇದ ಮಾಡಿರುವ ಘಟನೆ ನಡೆದಿದೆ.
Photo Credit : News Kannada

ಹೊಸದಿಲ್ಲಿ: ಇತ್ತೀಚೆಗೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ದೆಹಲಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದಾತನನ್ನು ಮೂವರು ಯುವಕರು ಹತ್ಯೆ ಮಾಡಿ ಹತ್ಯೆ ಮಾಡಿದ ಘಟನೆ ನಡೆದಿದೆ.

ಮೂವರು ಹದಿಹರೆಯದ ಹುಡುಗರು ಸೇರಿ 25 ವರ್ಷದ ಯುವಕನನ್ನು ಕೊಂದು ಬೆಂಕಿ ಹಚ್ಚಿದ್ದಾರೆ. ಯುವಕ ಎಸಗಿದ ಲೈಂಗಿಕ ದೌರ್ಜನ್ಯದಿಂದ ಇವರು ಸಿಟ್ಟಿಗೆದ್ದಿದ್ದರು ಎಂದು ಗೊತ್ತಾಗಿದೆ.

ಆಗ್ನೇಯ ದಿಲ್ಲಿಯಲ್ಲಿ ಈ ಘಟನೆ ನಡೆದಿದೆ. ಆಜಾದ್‌ ಅಹ್ಮದ್‌ ಎಂಬಾತನನ್ನು ಮೂವರು ಹುಡುಗರು ಕೊಂದು ಸುಟ್ಟು ಹಾಕಿದ್ದಾರೆ. ಈತ ಈ ಹುಡುಗರಲ್ಲಿ ಒಬ್ಬನ ಮೇಲೆ ಪದೇ ಪದೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಸೇಡು ತೀರಿಸಿಕೊಳ್ಳಲು ಇವರು ಈ ಕೃತ್ಯ ಎಸಗಿದ್ದಾರೆ.

ಈ ಮೂವರಲ್ಲಿ ಒಬ್ಬಾತ ನಿರ್ಜನ ಪ್ರದೇಶಕ್ಕೆ ಆಜಾದ್‌ ಅಹ್ಮದ್‌ನನ್ನು ಕರೆ ಮಾಡಿ ಕರೆಸಿಕೊಂಡಿದ್ದು, ಅಲ್ಲಿಗೆ ಬಂದಾತನನ್ನು ಹರಿತವಾದ ಆಯುಧದಿಂದ ಇರಿದು ಕೊಂದಿದ್ದಾರೆ. ನಂತರ ಒಣ ಎಲೆಗಳಿಂದ ಮುಚ್ಚಿ ಭಾಗಶಃ ಸುಟ್ಟುಹಾಕಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು