News Karnataka Kannada
Friday, May 10 2024
ಕ್ರೈಮ್

ಉಡುಪಿಯಲ್ಲಿ ನಾಲ್ವರ ಹತ್ಯೆ: ಸ್ಫೋಟಕ ಮಾಹಿತಿ ಬಯಲಿಗೆ

Four killed in Udupi: Explosive details unearthed
Photo Credit : News Kannada

ಉಡುಪಿ: ನೇಜಾರಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣದ ತನಿಖೆ ಸಂಬಂಧಿಸಿ ಹಲವು ಮಹತ್ವದ ಮಾಹಿತಿ ಹೊರಬರುತ್ತಿದೆ. ಹತ್ಯೆ ನಡೆಸಿದ ಆರೋಪಿ ಕನ್ನಡದಲ್ಲಿ ಮಾತನಾಡುತ್ತಿದ್ದು, ಕೇವಲ 20 ನಿಮಿಷಗಳ ಒಳಗೆ ನಾಲ್ವರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಎನ್ನಲಾಗಿದೆ.

ಉಡುಪಿಯ ಸಂತೆ ಕಟ್ಟೆಯಿಂದ ಆಟೋ ಒಂದರಲ್ಲಿ ಘಟನಾ ಸ್ಥಳಕ್ಕೆ ಬಂದಿದ್ದ ಆರೋಪಿ, ಮತ್ತೆ 20 ನಿಮಿಷಗಳ ಒಳಗೆ ಸಂತೆ ಕಟ್ಟೆಯ ಅದೇ ರಿಕ್ಷಾ ನಿಲ್ದಾಣಕ್ಕೆ ಆಗಮಿಸಿದ್ದ. ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ಆಟೋ ರಿಕ್ಷಾ ಚಾಲಕ ಶ್ಯಾಮ್ ನೇಜಾರು ಅವರು‌ ನಿಂತಿದ್ದ ಆಟೋ ನಿಲ್ದಾಣಕ್ಕೆ ಬಂದಿದ್ದ ಆರೋಪಿ, ತೃಪ್ತಿ ಲೇಔಟ್‌ ಗೊತ್ತೇ ಎಂದು ವಿಚಾರಿಸಿದ್ದ. ಆಗ ಉಳಿದ ಆಟೋ ಚಾಲಕರಲ್ಲಿ ವಿಚಾರಿಸಿ ಹಂಪನ ಕಟ್ಟೆ ಬಳಿ ಎಂದು ಮಾಹಿತಿ ಪಡೆದ ಆಟೋ ಚಾಲಕ, ಆರೋಪಿಯನ್ನು ಕರೆದುಕೊಂಡು ಬಂದಿದ್ದ. ರಿಕ್ಷಾದಲ್ಲಿ ಕುಳಿತಿದ್ದ ಆರೋಪಿ, ತೃಪ್ತಿ ಲೇಔಟ್ ಬಳಿ ಆಟೋ ಬಂದ ಕೂಡಲೇ ಇದೇ ಜಾಗವೆಂದು ಹೇಳಿ ರಿಕ್ಷಾ ತಿರುಗಿಸುವಂತೆ ಸೂಚಿಸಿದ್ದ‌ ಎನ್ನಲಾಗಿದೆ.

ಮನೆಯ ಗೇಟ್‌ ಮುಂಭಾಗ ಆಟೋ ನಿಲ್ಲಿಸಿದ ಚಾಲಕ, ಅಲ್ಲಿಂದ ವಾಪಸ್ ಬಂದಿದ್ದ. ಆರೋಪಿ ಮನೆ ಒಳಗೆ ಪ್ರವೇಶಿಸಿದ್ದ. ಈ ವೇಳೆ ನನಗೆ ಆರೋಪಿ ಬಗ್ಗೆ ಯಾವುದೇ ಅನುಮಾನ ಬಂದಿರಲಿಲ್ಲ ಎಂದು ಆಟೋ ಚಾಲಕ ಹೇಳಿದ್ದಾನೆ.

ಇನ್ನು ಮನೆಯ ಬಾಗಿಲ ಬಳಿ ಬಾಲಕನೋರ್ವ ನಿಂತುಕೊಂಡಿದ್ದ. ಆರೋಪಿಯು ಬೆನ್ನಿಗೆ ಹಾಕುವ ಬ್ಯಾಗ್ ಒಂದು ಹಾಕಿಕೊಂಡಿದ್ದ ಎಂದೂ ಆಟೋ ಚಾಲಕ ಮಾಹಿತಿ ನೀಡಿದ್ದಾನೆ. ಬೆಳಗ್ಗೆ 8.30ರ ಸುಮಾರಿಗೆ ಆರೋಪಿಯನ್ನು ಸಂತೆ ಕಟ್ಟೆಯಿಂದ ಕೃತ್ಯ ನಡೆದ ಮನೆ ಬಳಿ ಆಟೋ ಚಾಲಕ ಬಿಟ್ಟಿದ್ದರು. ಇದಾದ ಕೇವಲ 20 ನಿಮಿಷದೊಳಗೆ ಮತ್ತೆ ಅದೇ ರಿಕ್ಷಾ‌ ನಿಲ್ದಾಣಕ್ಕೆ ಆರೋಪಿ ಬಂದಿದ್ದ ಎಂಬ ಮಾಹಿತಿಯೂ ಲಭ್ಯವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು