News Karnataka Kannada
Sunday, May 12 2024
ಕ್ರೀಡೆ

ಆಟದ ಮಧ್ಯದಲ್ಲೇ ಮೈದಾನ ತೊರೆದ ಶುಭ್​ಮನ್​ ಗಿಲ್​

Gil
Photo Credit : News Kannada

ಮುಂಬೈ:  ನ್ಯೂಜಿಲೆಂಡ್ ವಿರುದ್ಧ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಉತ್ತಮ ಸ್ಥಿತಿಯಲ್ಲಿದೆ. ತಂಡ, ಆರಂಭಿಕ ರೋಹಿತ್ ಶರ್ಮಾ ಅವರ ಏಕೈಕ ವಿಕೆಟ್ ಕಳೆದುಕೊಂಡು 220 ಕ್ಕೂ ಹೆಚ್ಚು ರನ್ ಕಲೆಹಾಕಿದೆ.

ಆದರೆ ಈ ನಡುವೆ ತಂಡಕ್ಕೆ ಆಘಾತ ಎದುರಾಗಿದ್ದು, ರೋಹಿತ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ್ದ ಶುಭ್​ಮನ್ ಗಿಲ್, ಸ್ನಾಯು ಸೆಳೆತದಿಂದಾಗಿ ಆಟದ ಮಧ್ಯದಲ್ಲೇ ಮೈದಾನವನ್ನು ತೊರೆದಿದ್ದಾರೆ. ಹೀಗಾಗಿ ರಿಟೈರ್ಡ್​ ಹರ್ಟ್​ ಆಗಿರುವ ಗಿಲ್ ಬದಲಿಗೆ ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ ಅವರೊಂದಿಗೆ ಕ್ರೀಸ್​ನಲ್ಲಿದ್ದಾರೆ.

ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಶುಭ್​ಮನ್​ ಗಿಲ್ ರೋಹಿತ್ ಅವರೊಂದಿಗೆ ಅರ್ಧಶತಕದ ಜೊತೆಯಾಟವನ್ನು ಹಂಚಿಕೊಂಡರು. ಆ ವೇಳೆ 47 ರನ್ ಸಿಡಿಸಿ ನಾಯಕ ಅರ್ಧಶತಕ ವಂಚಿತರಾಗಿ ಪೆವಿಲಿಯನ್ ಸೇರಿಕೊಂಡರು. ನಂತರ ವಿರಾಟ್ ಕೊಹ್ಲಿ ಅವರೊಂದಿಗೆ ಬಿಗ್ ಇನ್ನಿಂಗ್ಸ್ ಕಟ್ಟಿದ ಗಿಲ್, ಅರ್ಧಶತಕವನ್ನು ಸಹ ಪೂರೈಸಿದರು. ಆದರೆ ಈ ವೇಳೆ ಮುಂಬೈನ ಬಿಸಿಲಿನಿಂದಾಗಿ ವಿರಾಟ್ ಕೊಹ್ಲಿ ಅವರೊಂದಿಗೆ ವಿಕೆಟ್ ಮಧ್ಯದಲ್ಲಿ ಓಡಲು ಕಷ್ಟ ಪಡುತ್ತಿದ್ದ ಗಿಲ್ ಅವರನ್ನು ಮೈದಾನದಿಂದ ಹೊರಬರುವಂತೆ ನಾಯಕ ರೋಹಿತ್ ಶರ್ಮಾ ಸೂಚನೆ ನೀಡಿದರು.

ಆ ಬಳಿಕ ನಾಯಕನ ಸಲಹೆ ಮೇರೆಗೆ ಗಿಲ್, 65 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 79 ರನ್ ಸಿಡಿಸಿ, ಪೆವಿಲಿಯನ್ ಸೇರಿಕೊಂಡಿದ್ದಾರೆ. ಇದೀಗ ಇಂಜುರಿಯಿಂದ ಪೆವಿಲಿಯನ್ ಸೇರಿಕೊಂಡಿರುವ ಗಿಲ್, ಮತ್ತೊಂದು ವಿಕೆಟ್ ಬಿದ್ದ ಬಳಿಕವೂ ಬ್ಯಾಟಿಂಗ್​ಗೆ ಬರಬಹುದಾಗಿದೆ.

https://twitter.com/RCBTweets/status/1724734978767069644/photo/2

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 1 / 5. Vote count: 2

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು