ಬೆಂಗಳೂರು: ಇತ್ತೀಚೆಗೆ ಮಹಿಳೆಯರಿಗೆ ಕಿರುಕುಳ ನೀಡುವ ಪ್ರವೃತ್ತಿ ಹೆಚ್ಚುತ್ತಿದೆ. ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡುವ, ಮೆಸೇಜ್ ಕಳುಹಿಸಿ ಟಾರ್ಚರ್ ನೀಡುವ ಆಸಾಮಿಗಳು ಹೆಚ್ಚುತ್ತಿದೆ. ಅಂತಹುದೇ ಒಂದು ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಮಹಿಳಾ ಟೆಲಿಕಾಲರ್ಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ತಾಲೂಕಿನ ಹಿಂಡಸಗೇರೆ ಗ್ರಾಮದ ನಿವಾಸಿ ಶಿವರಾಮ್ ಲೈಂಗಿಕ ಕಿರುಕುಳ ನೀಡಿರುವ ಆರೋಪಿ. ಶಿವರಾಮ್ ಟೆಲಿಕಾಲರ್ ಜ್ಯೋತಿ ಅವರಿಗೆ “ನನ್ನ ಜೊತೆ ಸಹಕರಿಸದಿದ್ದರೆ ನಿನ್ನ ಪತಿಯನ್ನು ಕೊಲ್ಲುವೆ. ನನ್ನ ಜೋತೆ ಚೆನ್ನಾಗಿರು, ನಿನ್ನ ಪತಿಯನ್ನು ಕೊಲೆ ಮಾಡುವೆ. ನಿನ್ನ (ಜ್ಯೋತಿ) ಪತಿಯನ್ನು ಕೊಂದ ಮೇಲೆ ಸೂಸೈಡ್ ಮಾಡಿಕೊಳ್ಳಬೇಡ” ಎಂದು ಸಂದೇಶ ಕಳುಹಿಸಿದ್ದಾನೆ. ಅಲ್ಲದೇ ಜ್ಯೋತಿ ಅವರ ಮನೆಗೆ ನುಗ್ಗಿ “ನೀನು ನನಗೆ ಬೇಕು ಅಷ್ಟೇ, ನಿನ್ನನ್ನು ನಾನು ಇಷ್ಟ ಪಡುತ್ತಿದ್ದೇನೆ. ನೀನು ಬರಬೇಕು ಎಂದು ಆರೋಪಿ ಶಿವರಾಮ್ ದಾಂದಲೆ ಮಾಡಿದ್ದಾನೆ. ಇದೀಗ ಟೆಲಿಕಾಲರ್ ಜ್ಯೋತಿ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.