News Karnataka Kannada
Tuesday, May 14 2024
ಮೈಸೂರು

ಮೈಸೂರು: ವಿದ್ಯುತ್ ಶಾಕ್ ಹೊಡೆದು ಮೂವರು ರೈತರು ಸಾವು

Three K'taka farmers die of electrocution
Photo Credit : IANS

ಮೈಸೂರು, ನ.6: ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ನೀಲಸೋಗೆ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಮೂವರು ರೈತರು ಮೃತಪಟ್ಟ ದಾರುಣ ಘಟನೆ ಭಾನುವಾರ ನಡೆದಿದೆ.

ಮೃತರನ್ನು ರಾಚೇಗೌಡ (60), ಹರೀಶ್ (33) ಮತ್ತು ಮಹದೇವಸ್ವಾಮಿ (38) ಎಂದು ಗುರುತಿಸಲಾಗಿದೆ. ರಾಚೇಗೌಡ ಅವರು ಹೊಲದಲ್ಲಿ ಬಿದ್ದ ವಿದ್ಯುತ್ ತಂತಿಯ ಮೇಲೆ ಕಾಲಿಟ್ಟಾಗ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಚೇಗೌಡ ವಿದ್ಯುದಾಘಾತಕ್ಕೊಳಗಾಗಿ ಒದ್ದಾಡುತ್ತಿರುವುದನ್ನು ನೋಡಿದ ನಂತರ, ಅವರ ಮಗ ಮಹದೇವಸ್ವಾಮಿ ಅವರ ರಕ್ಷಣೆಗೆ ಧಾವಿಸಿದರು, ಆದರೆ ಅವರು ಸಹ ವಿದ್ಯುತ್ ಸ್ಪರ್ಶಕ್ಕೆ ಒಳಗಾದರು. ಹತ್ತಿರದಲ್ಲಿದ್ದ ಹರೀಶ ಇಬ್ಬರನ್ನೂ ರಕ್ಷಿಸಲು ಹೋಗಿ ಅವನು ಸಹ ಸ್ಥಳದಲ್ಲೇ ಸಾವನ್ನಪ್ಪಿದನು. ಸ್ಥಳೀಯರು ಈ ಘಟನೆಯ ಬಗ್ಗೆ ತಮ್ಮ ನೋವನ್ನು ವ್ಯಕ್ತಪಡಿಸಿದರು ಮತ್ತು ಈ ಘಟನೆಗೆ ಅಧಿಕಾರಿಗಳನ್ನು ದೂಷಿಸಿದರು.

ತಿ.ನರಸೀಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು