ಕಾರವಾರ: ಹೊನ್ನಾವರ ತಾಲೂಕಿನ ತೊಟ್ಟಿಲಗುಂಡಿಯಲ್ಲಿ ಆಸ್ತಿ ವಿಚಾರವಾಗಿ ರಾಡ್ ನಿಂದ ಹೊಡೆದು ಅಣ್ಣನನ್ನೇ ತಮ್ಮಂದಿರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಹನುಮಂತ ಹೊನ್ನಪ್ಪ ನಾಯ್ಕ (54) ಮೃತಪಟ್ಟವರು ಮೃತನ ಸೋದರ ಮಾವ ಮಾರುತಿ ನಾಯ್ಕಗೆ (70)ಗಂಭೀರ ಗಾಯವಾಗಿದೆ. ತಮ್ಮಂದಿರಾದ ವಿನಾಯಕ ನಾಯ್ಕ, ಚಿದಾನಂದ ನಾಯ್ಕ ಕೊಲೆ ಮಾಡಿದ ಆರೋಪಿಗಳಾಗಿದ್ದು, ರಾಡ್ನಿಂದ ತಲೆಗೆ ಹೊಡೆಯಲಾಗಿದ್ದು, ಕಾರಣ ಗಂಭೀರ ಗಾಯಗೊಂಡಿದ್ದ ಹನುಮಂತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.