News Karnataka Kannada
Sunday, May 05 2024
ಬೆಂಗಳೂರು

ನೆಲಮಂಗಲ: ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಅಭಿಯಾನ

Kannada Sahitya Parishat membership drive
Photo Credit : By Author

ನೆಲಮಂಗಲ: ನಗರದ ನೇತಾಜಿ ಪಾರ್ಕಿನಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಮತ್ತು ನೆಲಮಂಗಲ ತಾಲೂಕು ಕನ್ನಡ  ಸಾಹಿತ್ಯ  ಪರಿಷತ್ ವತಿಯಿಂದ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಅಭಿಯಾನ ನಡೆಯಿತು.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಮಹಾಲಿಂಗಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಅಭಿಯಾನದಲ್ಲಿ  ಮಾತನಾಡಿದಅವರು “ಕನ್ನಡ ಸಾಹಿತ್ಯ ಪರಿಷತ್ತುಒಂದುಸ್ವಾಯುಕ್ತತೆಯ ಸಂಸ್ಥೆಯಾಗಿದ್ದುಇದು ಶತಮಾನ ಕಂಡ ಒಂದು ಸಂಸ್ಥೆ.ಈ ಸದಸ್ಯತ್ವ ಅಭಿಯಾನದಲ್ಲಿ ಯುವಕರಲ್ಲದೆ ನಿವೃತ್ತಿ ಹೊಂದಿರುವವರು ಸಹ ಸದಸ್ಯತ್ವವನ್ನು ಪಡೆಯಬೇಕೆಂದು” ತಿಳಿಸಿದರು.

ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಪುಟ್ಟಯ್ಯನವರು ಮಾತನಾಡಿ “ನಾವೆಲ್ಲರೂ ಕನ್ನಡ ಭಾಷೆ ನೆಲ ಜಲವನ್ನು ಗೌರವಿಸಬೇಕಾದರೆ ಕನ್ನಡ  ಸಾಹಿತ್ಯ ಪರಿಷತ್ತಿನ ಸದಸ್ಯತ್ವವನ್ನು ಪಡೆಯಬೇಕೆಂದು ಕಿವಿಮಾತು ಹೇಳಿದರು.

ತಾಲೂಕು ಅಧ್ಯಕ್ಷರಾದ ಪ್ರದೀಪ್ ಕುಮಾರ್ ಅವರು”ಈ ರಾಜ್ಯದಲ್ಲಿ ಏಳು ಕೋಟಿ ಜನಸಂಖ್ಯೆಇದ್ದು ಬೆರಳೆಣಿಕೆಯಷ್ಟು ಸದಸ್ಯತ್ವ ಹೊಂದಿರುವುದು ವಿಷಾದನೀಯ ಸಂಗತಿ ಎಂದು ತಿಳಿಸಿದರು.

ಗೌರವ ಕಾರ್ಯದರ್ಶಿಗಳಾದ ಬಿ ಪ್ರಕಾಶ್ ಮೂರ್ತಿಯವರು ಮಾತನಾಡಿ ಪ್ರತಿಮನೆಯಲ್ಲಿ ಇಬ್ಬರಂತೆ ಕನ್ನಡಸಾಹಿತ್ಯ ಪರಿಷತ್ತಿಗೆ ಸದಸ್ಯತ್ವವನ್ನು ಹೊಂದಿದರೆ  ಕನ್ನಡ ಭಾಷೆಗೆ ಕನ್ನಡ ನಾಡಿಗೆ ಗೌರವ ತಂದಂತಾಗುತ್ತದೆಎಂದು ಹೇಳಿದರು.

ಸ್ಥಳದಲ್ಲಿಯೇ ಅನೇಕ ಜನರು ಸದಸ್ಯತ್ವವನ್ನು ಪಡೆದರು ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಎನ್ ಆರ್ ನಾಗರಾಜ್, ಕೇಶವ ಮೂರ್ತಿ  ಮತ್ತು ರಾಜ್ಯ ‌ಸರ್ಕಾರಿ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳಾದ ಬಿರಾದರ್, ಕೆಂಪಬೈರಯ್ಯ , ನರಸಿಂಹಯ್ಯ, ಹನುಮಂತರಾಜು ಮುಂತಾದವರು ಹಾಜರಿದ್ದರು.

ಅನೇಕ ಗಣ್ಯರಿಗೆ ಸನ್ಮಾನ ಮಾಡುವುದರ ಮೂಲಕ ಗೌರವ ಸಮರ್ಪಣೆಯನ್ನು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು  ಸಲ್ಲಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು