News Karnataka Kannada
Saturday, April 27 2024
ಮೈಸೂರು

ಮೈಸೂರು: ಸೇವಾ ಕಾರ್ಯಗಳು ಸಾರ್ಥಕತೆ ತಂದುಕೊಡುತ್ತವೆ – ಸಿ ಎನ್ ಮಂಜೇಗೌಡ

C.N. Manjegowda said that service works bring meaning.
Photo Credit : By Author

ಮೈಸೂರು: ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣವನ್ನು ನಾವು ಬೆಳೆಸಿಕೊಳ್ಳಬೇಕು, ಸೇವಾ ಮನೋಭಾವನೆಯಿಂದ ಮಾಡುವ ಕಾರ್ಯಗಳು ಸಾರ್ಥಕತೆಯ ಜೊತೆಗ ಸಾಫಲ್ಯತೆಯನ್ನು ತಂದುಕೊಡುತ್ತವೆ ಎಂದು ವಿಧಾನ ಪರಿಷತ್ ಸದಸ್ಯರಾದ ಸಿಎನ್ ಮಂಜೇಗೌಡ ಹೇಳಿದರು.

ಅಗ್ರಹಾರದ ನಟರಾಜ ಕಲ್ಯಾಣ ಮಂಟಪದಲ್ಲಿ ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್, ಲಯನ್ಸ್ ಕ್ಲಬ್ ಆಫ್ ಮೈಸೂರ್ ಗೋಲ್ಡನ್ ಸಿಟಿ, ಲಯನ್ಸ್ ಕ್ಲಬ್ ಆಫ್ ಕಾಮಧೇನು, ಲಯನ್ಸ್ ಕ್ಲಬ್ ಆಫ್ ಸಿರಿ ,ಲ್ಯಾನ್ಸ್ ಕ್ಲಬ್ ಆಫ್ ಸ್ಯಾಂಡಲ್ ವುಡ್ ಹಾಗೂ ಮೈಸೂರು ಶ್ರೀ ಶಕ್ತಿ ಮಹಿಳಾ ವೇದಿಕೆಯ ಸಂಯುಕ್ತಾಯದಲ್ಲಿ ಕರ್ನಾಟಕ ರಕ್ತ ಡಾ. ಪುನೀತ್ ರಾಜಕುಮಾರ್ ಸ್ಮರಣೆ ಹಾಗೂ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ದಿವ್ಯ ಸಾನಿಧ್ಯ ಹೊಸಮಠದ ಪೂಜ್ಯ ಶ್ರೀ ಶ್ರೀ ಚಿದಾನಂದ ಸ್ವಾಮಿಗಳು, ದೀಪ ಬೆಳಗಿಸಿ ವಿಶೇಷ ಚೇತನರಿಗೆ ಉಚಿತ ಕೃತಕ ಕಾಲು ಜೋಡಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಲಯನ್ಸ್‌ ಕ್ಲಬನ್‌ ಸಮಾಜ ಸೇವಾ ಕಾರ್ಯಗಳು ಜನಸಾಮಾನ್ಯರಿಗೆ ಅದರಲ್ಲೂ ಕಡು ಬಡವರಿಗೆ ಹೆಚ್ಚು ಉಪಯುಕ್ತರವಾಗಿವೆ. ವ್ಯಕ್ತಿತ್ವ ವಿಕಾಸನ, ಜನರ ಸೇವೆ ಹಾಗೂ ಉತ್ತಮ ಬಾಂಧವ್ಯ ಬೆಳೆಸಲು ಲಯನ್ಸ್ ಕ್ಲಬ್ ಗಳು ಮಾದರಿ ಸಂಸ್ಥೆಯಾಗಿವೆ ಇದನ್ನು ಎಲ್ಲರೂ ಉಪಯೋಗಿಸಿಕೊಳ್ಳಬೇಕು ಎಂದರು.

ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷರಾದ ಡಾ. ಆರ್ ಎಚ್ ಪವಿತ್ರ. ಮರಣದ ನಂತರವೂ ಜೀವಿಸಿರುವ ಪುನೀತ್‌ ಜನನವಾದ ಮೇಲೆ ಮರಣ ನಿಶ್ಚಿತ. ಮರಣಿಸಿದ ನಂತರವೂ ಜನರ ಮನಸ್ಸಿನಲ್ಲಿ ಜೀವಂತ ವಾಗಿರುವಂತೆ ಬದುಕಬೇಕು. ಅಂಥ ಬದುಕು ಪುನೀತ್‌ ರಾಜ್‌ಕುಮಾರ್‌ ಅವರದ್ದಾಗಿತ್ತು. ಅಂಗವಿಕಲತೆ ಶಾಪವಲ್ಲ, ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಅದನ್ನು ಮೆಟ್ಟುನಿಂತು ಅಂಗವಿಕಲರು ಎಲ್ಲರಂತೆ ಬದುಕಲು ಸಾಧ್ಯ ಎಂದರು.

ಇದೇ ವೇಳೆ ಮೈಸೂರು ನಗರ ಮತ್ತು ಜಿಲ್ಲೆಯ ಹತ್ತು ಮಂದಿ ಫಲಾನುಭವಿಗಳಿಗೆ ಕೃತಕ ಕಾಲು ಜೋಡಣೆ ಮಾಡಲಾಯಿತು.

ಲಯನ್ಸ್ ಕ್ಲಬ್ ನ ಡಿಸ್ಟ್ರಿಕ್ಟ್ ಗವರ್ನರ್ ಡಾ. ವಿದ್ಯಾ, ಲಯನ್ಸ್ ಸಂಸ್ಥೆಯ ಫಸ್ಟ್ ಮಲ್ಟಿಪಲ್ ಕೌನ್ಸಿಲಿಂಗ್ ಅಧ್ಯಕ್ಷರಾದ ಡಾ. ನಾಗರಾಜ್ ಬಿ ಬೈರಿ, ಜಯಪ್ರಕಾಶ್, ಮಹಾವೀರಚಂದ್ ಬನ್ಸಾಲಿ, ಮೈಸೂರು ಗೋಲ್ಡನ್ ಸಿಟಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದಸುರೇಶ್ ಗೋಲ್ಡ್, ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷರಾದ ಡಾ. ಆರ್ ಎಚ್ ಪವಿತ್ರ, ಕಾರ್ಯದರ್ಶಿ ಪ್ರಮೀಳಾ, ಜಿ ಎನ್ ಉಮಾಶಂಕರ್, ಸಿರಿ ಬಾಲು, ವೆಂಕಟೇಶ್, ಶೋಭಾ ಬಾಲು, ಚಲನಚಿತ್ರ ನಟರಾದ ಲಕ್ಷ್ಮಿಪತಿ, ಕೆ ಆರ್ ಮಿಲ್ ಶಿವಣ್ಣ, ಚಲನಚಿತ್ರ ನಿರ್ಮಾಪಕರು ಎಂ ಡಿ ಪಾರ್ಥ ಸಾರಥಿ, ಸಿ ಹುಚ್ಚಪ್ಪ ಚಾರ್, ಜಯರಾಜ್ ಅರಸು, ಹಾಗೂ ಇನ್ನಿತರರು ಹಾಜರಿದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು