ಬೆಂಗಳೂರು: ನಗರದ ಕುಂದಲಹಳ್ಳಿ ಗೇಟ್ ಬಳಿ ಶುಕ್ರವಾರ ರಾತ್ರಿ ನಾಲ್ವರು ಪುಡಿ ರೌಡಿಗಳು ಬೇಕರಿಯ ಹುಡುಗರಿಗೆ ವಿನಾಕಾರಣ ಹಲ್ಲೆ ನಡೆಸಿದ ಕುರಿತು ವರದಿ ಯಾಗಿದೆ.
ನಾಲ್ಕು ಜನರ ರೌಡಿಗಳ ಗುಂಪು ಕುಂದಲಹಳ್ಳಿ ಗೇಟ್ ಬಳಿಯಿರುವ ಬ್ರಹ್ಮಲಿಂಗೇಶ್ವರ ಬೇಕರಿಯಲ್ಲಿ ಸಿಗರೇಟ್ ಖರೀದಿಸಿ ಹಣ ಕೇಳಿದ ಹುಡುಗರಿಗೆ ಹಿಗ್ಗಾ ಮುಗ್ಗಾ ಬಾರಿಸಿದ್ದಾರೆ. ಸದ್ಯ ಹಲ್ಲೆಗೊಳಗಾದವರು ಹೆಚ್ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಕೂಡಲೇ ಇಂತಹ ರೌಡಿಗಳ ವಿರುದ್ದ ಕಠಿಣ ಕ್ರಮ ಕೈಗೊಂಡು ಹೆಡೆಮುರಿ ಕಟ್ಟಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
ಬೇಕರಿಯ ಕೆಲಸಗಾರ ನಿತಿನ್ ಮಾತನಾಡಿ ಸಿಗರೇಟು ಪಡೆದವರು ಓನರ್ ಎಲ್ಲಿ ಅಂತ ಕೇಳಿದರು. ಒಳಗಿದ್ದಾರೆ ಅಂತ ಹೇಳಿದಾಗ ಹತ್ತಿರ ಯಾಕೆ ಬರ್ತಿಯಾ ಅಂತ ವಿನಾಕಾರಣ ಹಲ್ಲೆ ಮಾಡಿದರು. ನಾವು ಸಿಗರೇಟಿನ ಹಣವನ್ನೂ ಕೇಳಲಿಲ್ಲ ಅದಕ್ಕೂ ಮೊದಲೇ ಮನಸೋಯಿಚ್ಚೆ ಹಲ್ಲೆ ಮಾಡಿದರು ಎಂದು ದುಖಃ ತೋಡಿಕೊಂಡರು. ಅಂಗಡಿಯಲ್ಲಿನ ಸಿಗರೇಟ್, ಗ್ಲಾಸ್ ಎಲ್ಲಾ ಹೊಡೆದಾಕಿದ್ದಾರೆ. ಈಗ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದೇನೆ ಎಂದು ಹಲ್ಲೆಗೊಳಗಾದ ನಿತಿನ್ ಹೇಳಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರಿನಿಂದ ಇಲ್ಲಿಗೆ ಬಂಧು ನಾವು ಇಲ್ಲಿ ಒಂದು ವರ್ಷದಿಂದ ಅಂಗಡಿ ನಡೆಸುತಿದ್ದೇವೆ. ಹಲ್ಲೆ ಮಾಡಿದವರು ಚೀಟಿಯ 80 ಸಾವಿರ ಹಣ, ಸರ, ಮೊಬೈಲ್ ತೆಗೆದುಕೊಂಡು ಹೋಗಿದ್ದಾರೆನಿತಿನ್ ತಿಳಿಸಿದರು. ಬೈಂದೂರು ಶಾಸಕ ಸುಕುಮಾರ್ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಪೋಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಕರವೇ ಅದ್ಯಕ್ಷ ಪ್ರವೀಣ್ ಶೆಟ್ಟಿ ಅವರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು ದುಷ್ಕರ್ಮಿಗಳ ಹೆಡೆಮುರಿ ಕಟ್ಟಬೇಕೆಂದು ಒತ್ತಾಯಿಸಿದ್ದಾರೆ.
ಯಾವ ಕಾರಣಕ್ಕಾಗಿ ಹಲ್ಲೆ ನಡೆದಿದೆ ಅನ್ನೊದು ಗೊತ್ತಿಲ್ಲ. ಹಲ್ಲೆಗೊಳಗಾದ ಯುವಕರು ನಡುಗುತಿದ್ದಾರೆ. ಹಲ್ಲೆ ಮಾಡಿದವರು ತಮಿಳು ಮಿಶ್ರಿತ ಭಾಷೆ ಮಾತನಾಡುತಿದ್ದರು. ಯುವಕರು ಕಷ್ಟ ಪಟ್ಟು ದುಡಿಯುತಿದ್ದಾರೆ. ಅಕ್ಕಪಕ್ಕದಲ್ಲಿದ್ದ ಓರ್ವರು ಈ ಪುಡಿ ರೌಡಿಗಳನ್ನು ಛೂ ಬಿಟ್ಟಿದ್ದಾರೆ ಎನ್ನಲಾಗಿದೆ. ೨೪ ಗಂಟೆಗೊಳಗಾಗಿ ಆರೋಪಿಗಳ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.