ಹುಣಸೂರು: ಪತಿಯ ಅಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದ ಪತ್ನಿಗೆ ಬೆಲ್ಟ್ ನಿಂದ ಹಿಗ್ಗಾಮುಗ್ಗ ಥಳಿಸಿದ ಪ್ರಕರಣ ತಾಲೂಕಿನ ಹಂಚ್ಯ ಗ್ರಾಮದಿಂದ ಜರುಗಿದೆ.
ಸದ್ಯ ಪೊಲೀಸರು ಗ್ರಾಮದ ಸಯ್ಯಾದ್ ಮೊಕಿದೀನ್ ಅವರ ಪುತ್ರ ಸಯ್ಯಾದ್ ಯಾಸಿನ್ (32) ಅವರನ್ನು ಬಂಧಿಸಿದ್ದಾರೆ. ಈತನ ಪತ್ನಿ ಅಂಬ್ರೀನ್ ಬಾನು (31) ಎಂಬಾಕೆಯೆ ಪತಿಯಿಂದ ಹಿಗ್ಗಾಮುಗ್ಗ ಥಳಿತದ ಹಲ್ಲೆಗೆ ಒಳಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಂಬ್ರೀನಾ ಕಳೆದ 8 ವರ್ಷಗಳ ಹಿಂದೆ ಸಯ್ಯಾದ್ ಯಾಸಿನೊಂದಿಗೆ ಮದುವೆಯಾಗಿ ಮೂರು ಮಕ್ಕಳಿದ್ದಾರೆ. ಈಕೆಯ ಪತಿ ಕೆಲವು ಟೂರಿಸ್ಟ್ ಬಸ್ ಗಳನ್ನು ಇಟ್ಟುಕೊಂಡು ಬಾಡಿಗೆಗೆ ಕಳುಹಿಸುತ್ತಿದ್ದನು, ಇತ್ತೀಚೆಗೆ ಧರ್ಮಸ್ಥಳ ಗ್ರಾಮೀಣ ಸಂಘದ ಪ್ರತಿನಿಧಿಗಳು ಪ್ರವಾಸಕ್ಕೆ ಹೋಗುವಾಗ ಈತ ಬಸ್ ಗಳನ್ನು ಕಳುಹಿಸುತ್ತಿದ್ದು, ಧರ್ಮಸ್ಥಳ ಸಂಘದ ಅರಕಲಗೂಡು ತಾಲೂಕು ರಾಮನಾಥಪುರದ ಪ್ರತಿನಿಧಿಯಾಗಿದ್ದ ಹೇಮಲತಾ ಈತನಿಗೆ ಪರಿಚಯವಾಗಿ, ಸ್ನೇಹಕ್ಕೆ ತಿರುಗಿ ಆಗಾಗ್ಗೆ ಮನೆಗೂ ಕರೆದುಕೊಂಡು ಬರುತ್ತಿದ್ದು, ಜ. 16 ರಂದು ತನ್ನ ಪತಿ ಅವನ ಪ್ರೇಯಸಿಯೊಂದಿಗೆ ನಡೆದುಕೊಳ್ಳುತ್ತಿರುವುದನ್ನು ನೋಡಿ ಮನೆಯಲ್ಲಿ ಈ ರೀತಿ ಸರಿಯಲ್ಲ ಎಂದು ಪತ್ನಿ ಪ್ರಶ್ನಿಸಿದಕ್ಕೆ ಕುಪಿತಗೊಂಡ ಪತಿ ತನ್ನ ಬೆಲ್ಟ್ ನಿಂದ ಹಿಗ್ಗಾಮುಗ್ಗ ಥಳಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ತನ್ನ ಪ್ರೇಯಸಿಯೊಂದಿಗೆ ಪರಾರಿಯಾಗಿದ್ದ ಎನ್ನಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಹಲ್ಲೆಗೆ ಒಳಗಾಗಿದ್ದ ಅಂಬ್ರೀಣ್ ದೂರು ನೀಡಿದರು. ದೂರು ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಯ್ಯಾದ್ ಯಾಸಿನ್ ಮತ್ತು ಹೇಮಾವತಿ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.