ಗುಜರಾತ್: ಚುನಾವಣೆಯಲ್ಲಿ ೪೦೦ ಸೀಟು ಗೆದ್ದು ಸಂವಿಧಾನವನ್ನು ಬದಯಾಯಿಸುತ್ತೇವೆ ಎನ್ನುತ್ತಿರುವ ಬಿಜೆಪಿ, ಅಲ್ಲಗಳೆದ ವಿಷಯಗಳನ್ನು ಅಧಿಕಾರ ಹಿಡಿಯುತ್ತಿದ್ದಂತೆ ಜಾರಿಗೊಳಿಸುತ್ತದೆ ಎಂದು ಟೀಕಿಸಿದ್ದಾರೆ.
ʼಸಂವಿಧಾನ ಬದಲಾವಣೆಯ ಬಗ್ಗೆ ಬಿಜೆಪಿಯ ಅನೇಕ ನಾಯಕರು, ಮಂತ್ರಿಗಳು ಹಾಗು ಅಭ್ಯರ್ಥಿಗಳು ಮಾತಾಡುತ್ತಾರೆ. ಆದರೆ ಪ್ರಧಾನಿ ಮೋದಿ ಮಾತ್ರ ಇಂತಹ ಯಾವುದೇ ಉದ್ದೇಶ ಇಲ್ಲ ಎನ್ನುತ್ತಾರೆ. ಪಕ್ಷದ ಇತಿಹಾಸವನ್ನು ನೋಡಿದರೆ, ಕಿರಿಯ ನಾಯಕರ ಬಾಯಲ್ಲಿ ತಾವು ಮಾಡಬೇಕು ಎಂದುಕೊಂಡಿರುವುದನ್ನು ಹೇಳಿಸಿ ಮೊದಮೊದಲು ಅಲ್ಲಗಳೆಯುತ್ತಾರೆ. ಅಧಿಕಾರಕ್ಕೆ ಬರುತ್ತಿದ್ದಂತೆ ಅಲ್ಲಗಲೆದ ವಿಷಯಗಳನ್ನು ಜಾರಿಗೆ ತರುತ್ತಾರೆʼ ಎಂದು ಪ್ರಿಯಾಂಕಾ ದೋಷಾರೋಪಣೆ ಮಾಡಿದ್ದಾರೆ.
ಸಂವಿಧಾನ ಬದಲಾವಣೆಯ ಮೂಲಕ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಿ ಜನರ ಹಕ್ಕುಗಳನ್ನು ಬಿಜೆಪಿ ಕಸಿಯಬಯಸುತ್ತಿದೆ ಎಂದು ಆರೋಪಿಸಿದ್ದಾರೆ.
ಗುಜರಾತ್ನಲ್ಲಿ ಮೇ ೭ರಂದು ಮತದಾನ ನಡೆಯಲಿದ್ದು, ಜೂ. ೪ರಂದು ಫಲಿತಾಂಶ ಘೋಷಣೆಯಾಗುತ್ತದೆ.