ಸುಂಟಿಕೊಪ್ಪ: ಹೊಸ ಸ್ಕೂಟರ್ಗಳನ್ನು ಕಾಸರಗೋಡಿನ ಶೋರೂಂಗೆ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿಕೊಂಡಿದ್ದು, ಪಾದಚಾರಿ ಮಹಿಳೆ ಲಾರಿಯಡಿ ಸಿಲುಕಿ ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದೆ.
ರಾಮನಾಥಪುರದ ನಿವಾಸಿ ದಿಲ್ಶಾದ್ (53) ಮೃತ ಮಹಿಳೆ.ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಹೊಸೂರಿನಿಂದ ಲಾರಿಯಲ್ಲಿ ಹೊಸ ಸ್ಕೂಟರ್ಗಳನ್ನು ತುಂಬಿಸಿಕೊಂಡು ಚಾಲಕ ಶಿವಶಕ್ತಿ ಎಂಬಾತ ಕಾಸರಗೋಡಿನ ಶೋರೂಮ್ಗೆ ಸಾಗಿಸುತ್ತಿದ್ದ. ಸೋಮವಾರ ಬೆಳಿಗ್ಗೆ ಸುಂಟಿಕೊಪ್ಪ ಗದ್ದೆಹಳ್ಳದ ಪಟ್ಟೆಮನೆ ತಿರುವಿನಲ್ಲಿ ವಂದನಾಬಾರ್ ಬಳಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿಕೊಂಡಿದೆ. ಅದೇ ವೇಳೆಗೆ ಸುಂಟಿಕೊಪ್ಪ 3ನೇ ವಾರ್ಡಿನಲ್ಲಿ ತನ್ನ ಸಂಬಂಧಿಕರ ಸಾವಿಗೆ ಬಂದಿದ್ದ ಮಹಿಳೆ ಲಾರಿಯಡಿ ಸಿಲುಕಿ ಸ್ಥಳದಲ್ಲೇ ಅಸುನೀಗಿದ್ದಾರೆ.
ಮಗುಚಿದ ಲಾರಿಯಡಿ ಸಿಲುಕಿ ನರುಳುತ್ತಿದ್ದ ಚಾಲಕನನ್ನು ಸ್ಥಳೀಯ ನಿವಾಸಿಗಳು ರಕ್ಷಿಸಿದ್ದಾರೆ.ಲಾರಿಯನ್ನು ಕ್ರೇನ್ ಸಹಾಯದಿಂದ ಮೇಲೆತ್ತಿದ್ದಾಗ ಲಾರಿಯಡಿ ಸಿಲುಕಿದ್ದ ಮಹಿಳೆಯ ಮೃತ ಶರೀರ ಪತ್ತೆಯಾಗಿದೆ. ಸುಂಟಿಕೊಪ್ಪ ಪೊಲೀಸ್ ಠಾಣೆಯ ಪ್ರಭಾರ ಠಾಣಾಧಿಕಾರಿ ಎ.ಎಸ್.ಐ.ಕಾವೇರಪ್ಪ, ಮುಖ್ಯಪೇದೆ ಸತೀಶ್ ಹಾಗೂ ಸಹ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಸಂಬಂಧಿ ಸಾವಿಗೆ ಬಂದವಳೇ ಹೆಣವಾದಳು: ನಿಯಂತ್ರಣ ತಪ್ಪಿ ಮಗುಚಿದ ಲಾರಿಯಡಿ ಸಿಲುಕಿ ಮಹಿಳೆ ಸಾವು!
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.