ಮೈಸೂರು: ನಗರದ ಉದ್ಯಮಿಯೊಬ್ಬರ ಹೆಸರು ಹೇಳಿಕೊಂಡು ಹಲವರಿಂದ ಹಣ ಪಡೆದು ಯಾಮಾರಿಸುತ್ತಿರುವ ಪ್ರಕರಣ ಮೈಸೂರು ಹಾಗೂ ಚಾಮರಾಜನಗರದಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮುಡಾ ಮಾಜಿ ಅಧ್ಯಕ್ಷ ಗೋವಿಂದರಾಜು ಅವರ ಪುತ್ರ ಉದ್ಯಮಿ ಗುರುರಾಜು ಅವರ ಹೆಸರನ್ನು ಹೇಳಿಕೊಂಡು ವಂಚಕರು ಹಲವರಿಂದ ಹಣ ಪಡೆದು ವಂಚಿಸುತ್ತಿದ್ದಾರೆ. ಗುರುರಾಜು ಅವರ ಹೆಸರು ಹೇಳಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ವೈನ್ ಸ್ಟೋರ್ ಮತ್ತು ಬಾರ್ಗಳಿಂದ ಕೆಲವರು ಹಣ ವಸೂಲಿ ಮಾಡುತ್ತಿದ್ದಾರೆ. ತನ್ನ ಕಾರು ಕೆಟ್ಟುಹೋಗಿದೆ, ಪರ್ಸ್ ಬಿಟ್ಟು ಬಂದಿದ್ದೇನೆ, ಎಟಿಎಂ ಕಾರ್ಡ್ ವರ್ಕ್ ಆಗುತ್ತಿಲ್ಲ ಎಂಬಿತ್ಯಾದಿ ಸಬೂಬುಗಳನ್ನು ಹೇಳಿ ಹಣ ಪಡೆದು ವಂಚಿಸಿದ್ದಾರೆ. ಈ ಕುರಿತ ಆಡಿಯೋ ಹಾಗೂ ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯ ವೈರಲ್ ಆಗಿದೆ. ವಂಚಕರ ವಿಚಾರವಾಗಿ ಎಚ್ಚರಿಕೆಯಿಂದ ಇರಲು ತಿಳಿಸಲಾಗಿದೆ.
ಈ ಸಂಬಂಧ ನಜರಬಾದ್ ಹಾಗೂ ಚಾಮರಾಜನಗರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ.
ಮೈಸೂರು ಉದ್ಯಮಿ ಹೆಸರು ಹೇಳಿಕೊಂಡು ಹಣ ಪಡೆದು ವಂಚನೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.