News Karnataka Kannada
Sunday, April 28 2024
ಹಾಸನ

ಸಕಲೇಶಪುರ: ವಸತಿ ರಹಿತರಿಗೆ ಸೂರು ಕಲ್ಪಿಸುವ ಚಿಂತನೆ- ಶಾಸಕ ಎಚ್ ಕೆ ಕುಮಾರಸ್ವಾಮಿ

Hk
Photo Credit : News Kannada

ಸಕಲೇಶಪುರ: ವಸತಿ ರಹಿತರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಅರ್ಹ ಫಲಾನುಭವಿಗಳ ಪಟ್ಟಿ ಆಯ್ಕೆ ಮಾಡುವ ಸಂಬಂದ ಮಿನಿ ವಿಧಾನಸೌದದಲ್ಲಿ ಶಾಸಕ ಎಚ್ ಕೆ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯಿತು.

ಈ ಸಂದರ್ಭದಲ್ಲಿ ಮಾತ ನಾಡಿದ ಅವರು, ಪಟ್ಟಣದಲ್ಲಿ ಹಲವು ದಶಕಗಳಿಂದ ತಾಂತ್ರಿಕ ಕಾರಣದಿಂದ ಅರ್ಹರಿಗೆ ಸೂರು ಕಲ್ಪಿಸಲು ಸಾಧ್ಯವಾಗಿರಲಿಲ್ಲ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಳ ವನ್ನು ಗುರುತಿಸಿ ಅರ್ಹರಿಗೆ ಸೂರು ನೀಡಲು ಪ್ರಯತ್ನಿಸಲಾ ಗುವುದು. ಸೂರು ನೀಡುವ ಸಂಧರ್ಭದಲ್ಲಿ ಅಂಗವಿಕಲರು, ಲೈಂಗಿಕ ಅಲ್ಪಸಂಖ್ಯಾತರು, ಕೊಳೆಗೇರಿ ನಿವಾಸಿಗಳು, ಬೀದಿ ವ್ಯಾಪಾರಿಗಳು, ಕರಕುಶಲ ಕರ್ಮಿ ಗಳು, ಆಟೊ ಚಾಲಕರು, ಗುತ್ತಿಗೆ ಪೌರಕಾರ್ಮಿಕರು ವಿಧವೆಯರು ,ಹಾಗೂ ಮನೆಕೆಲಸ ಮಾಡುವ ಕಾರ್ಮಿರಿಗೆ ಆದ್ಯತಾನುಸಾರ ಹಂಚಿಕೆ ಮಾಡ ಬೇಕಾಗುತ್ತದೆ ಎಂದರು.

ಹೆಬ್ಬಸಾಲೆಯಲ್ಲಿ ಖರೀದಿ ಮಾಡಿರುವ ೧೬ ಎಕರೆ ಜಾಗದಲ್ಲಿ ೫ ಎಕರೆ ಜಾಗದ ಕುರಿತು ಪ್ರಕರಣ ನ್ಯಾಯಾಲಯದಲ್ಲಿದೆ. ಆ ಜಾಗದ ಆದೇಶ ಬರೋವರೆಗೂ ಯಾವು ದೇ ರೀತಿಯಲ್ಲಿ ನಿವೇಶನ ನೀಡ ಲು ಆಗೋಲ್ಲ. ಒಟ್ಟು ಉಳಿದ ೧೧ ಎಕರೆ ಜಾಗದಲ್ಲಿ ನಿವೇಶನ ರಹಿತರಿಗೆ ೨೦ ಇಂಟು ೩೦ ಆಡಿ ನಿವೇಶನ ನೀಡಲು ಕ್ರಮ ಕೈ ಗೊಳ್ಳಲಾಗುವುದು ಎಂದರು.

ವಸತಿ ರಹಿತರ ಹೋರಾಟ ಸಮಿತಿ ವತಿಯಿಂದ ಸತತವಾಗಿ ಆರು ದಿನಗಳು ಪುರಭವನದ ಮುಂಬಾಗ ವಸತಿ ರಹಿತರಿಗೆ ವಸತಿ ಕಲ್ಪಿಸುವಂತೆ ಪ್ರತಿಭಟನೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಶಾಸಕರು ಮುಂದಿನ ದಿನಗಳಲ್ಲಿ ಅಶ್ರಯ ಸಮಿತಿಯ ಸಭೆ ನಡೆಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ ನಂತರ ಮುಷ್ಕರ ಹಿಂಪಡೆಯಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಈ ಸಂಧರ್ಭದಲ್ಲಿ ಪುರಸಭೆ ಅಧ್ಯಕ್ಷ ಕಾಡಪ್ಪ, ತಹಶೀಲ್ದಾರ್ ಮೇಘನಾ ತಾಲ್ಲೂಕು ಕಾರ್ಯನಿರ್ವಣಾಧಿಕಾರಿ ವೆಂಕಟೇಶ್, ಮುಖ್ಯಾಧಿಕಾರಿ ಮಂಜುನಾಥ್, ಕಂದಾಯ ಇಲಾಖೆಯ ಉಮೇಶ್ ಮುಂತಾದವರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು