News Karnataka Kannada
Monday, April 29 2024
ಹಾಸನ

ಬೇಲೂರು: ಒಂದು ತಿಂಗಳಲ್ಲೇ ಕಿತ್ತುಹೋದ ಡಾಂಬರು, ಗ್ರಾಮಸ್ಥರ ಪ್ರತಿಭಟನೆ

Belur: Villagers protest against asphalt that was uprooted within a month
Photo Credit : News Kannada

ಬೇಲೂರು: ಕಳಪೆ ಕಾಮ ಗಾರಿ ಒಂದು ತಿಂಗಳ ಮೊದಲೇ ಡಾಂಬಾರ್ ಸಂಪೂರ್ಣ ಕಿತ್ತು ಹೋಗಿದೆ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ತಾಲೂಕಿನ ಬಿಕ್ಕೋಡು ಹೋಬಳಿಯ ಕುಶಾವರ ಗ್ರಾಮಪಂಚಾಯತಿ ವ್ಯಾಪ್ತೀಯ ಕೌರಿ ಗಡಿಯಿಂದ ಕುಶಾವರದ ತನಕ ಸುಮಾರು ೧.೫೦ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದ ರಸ್ತೆ ಕೇವಲ ೧ ತಿಂಗಳಲ್ಲಿ ಕಿತ್ತು ಹೋಗಿದ್ದು ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಗ್ರಾಮಸ್ಥರು ರಸ್ತೆಯಲ್ಲಿ ನಿಂತು ಪ್ರತಿಭಟಿಸಿದರು.

ಇದೇ ವೇಳೆ ಕುಶಾವರ ಗ್ರಾಮಸ್ಥರಾದ ನಾಗರಾಜ್ ಮಾತ ನಾಡಿ ಈ ರಸ್ತೆ ತುಂಬಾ ಗುಂಡಿ ಬಿದ್ದು ಸಂಪೂರ್ಣ ವಾಗಿ ಸಾರ್ವ ಜನಿಕರು ಓಡಾಡದಂತ ಪರಿಸ್ಥಿತಿ ನಿರ್ಮಾಣವಾಗಿತ್ತು.ಇದನ್ನು ಅರಿತು ಹಿಂದಿನ ಪ್ರವಾಸೋದ್ಯಮ ಸಚಿವರಾಗಿದ್ದ ಸಿಟಿ ರವಿ ಯವರು ಈ ಗ್ರಾಮಕ್ಕೆ ೨ ಕೋಟಿ ಹಣವನ್ನು ಬಿಡುಗಡೆ ಮಾಡಿದ್ದರು.ಅದರಂತೆ ಕೋವಿಡ್ ಹಿನ್ನಲೆಯಲ್ಲಿ ಇಲ್ಲಿಗೆ ಸುಮಾರು ೧.೫೦ ಕೋಟಿ ಹಣದಲ್ಲಿ ಸುಮಾರು ಎರಡು ಕಿಮೀ ರಸ್ತೆಗೆ ಡಾಂಬಾರ್ ಹಾಕಿ ಕೇವಲ ೧ ತಿಂಗಳಲ್ಲೇ ಸಂಪೂರ್ಣ ಕಿತ್ತು ಹೋಗಿದ್ದು ಇದಕ್ಕೆ ಗುತ್ತಿಗೆದಾರನ ವೈಫಲ್ಯವೇ ಕಾರಣ. ಕೂಡಲೇ ಈತನ ಮೇಲೆ ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸಿದರು.

ಕೌರಿ ಗ್ರಾಮದ ಸಂಜಯ್ ಮಾತನಾಡಿ ೬ ತಿಂಗಳ ಹಿಂದೆ ನಮ್ಮ ಊರಿನ ಮನೆ ಮಗಳಾದ ಪಲ್ಲವಿ ಸಿಟಿ ರವಿಯವರು ನಮ್ಮ ಊರಿಗೆ ಡಾಂಬರೀಕರಣ ಮಾಡಲು ಶಾಸಕರ ಮೂಲಕ ಇಲ್ಲಿ ಭೂಮಿ ಪೂಜೆಯನ್ನು ಮಾಡಿಸುವ ಮೂಲಕ ಉತ್ತಮ ಕಾಮಗಾರಿ ಮಾಡುವಂತೆ ಸೂಚಿಸಿದ್ದರು ಆದರೆ ಕೇವಲ ೧ ತಿಂಗಳಲ್ಲಿ ರಸ್ತೆ ಸಂಪೂರ್ಣ ಕಿತ್ತುಹೋಗಿದೆಇಷ್ಟೆಲ್ಲಾ ಕಳಪೆ ಕಾಮಗಾರಿ ಮಾಡಿದಲ್ಲದೆ ಒಳ ಚರಂಡಿ ವ್ಯವಸ್ಥೆ ಹಾಗೂ ಕಿರು ಸೇತುವೆ ನಿರ್ಮಿಸಿದ್ದರೂ ಇದಕ್ಕೆ ಸಂಬಂಧಪಟ್ಟ ಇಂಜಿನಿಯರ್ ಹಾಗೂ ಗುತ್ತಿಗೆದಾರರಾಗಲಿ ಒಂದೇ ಒಂದು ದಿನ ಪರಿಶೀಲನೆ ನಡೆಸಿಲ್ಲ.

ಇಂತಹ ಕಳಪೆ ಕಾಮಗಾರಿ ಮಾಡಿರುವವರ ಮೇ ಲೆ ಶಾಸಕರು ಯಾವ ಉದ್ದೇಶಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ನಮಗೆ ಅನುಮಾನವಾಗಿದ್ದು ಕೂಡಲೇ ಇದರ ಬಗ್ಗೆ ಗಮನ ನೀಡಬೇಕು.ಇಲ್ಲಿಯ ಕೆಲ ಗ್ರಾಮಸ್ಥರು ರಸ್ತೆಯ ಎರಡೂ ಬದಿಯಲ್ಲಿ ರಸ್ತೆಗೆ ಮೀಸಲಿಟ್ಟಿದ್ದ ಜಾಗವನ್ನು ಒತ್ತುವರಿ ಮಾಡಿ ಕೊಂಡಿದ್ದರೂ ಸಹ ಕಂದಾಯ ಇಲಾಖೆಯ ಒಬ್ಬ ಅಧಿಕಾರಿಯು ಬಂದು ಪರಿಶೀಲನೆ ನಡೆಸಿಲ್ಲ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಸ್ಥರಾದ ರುದ್ರೇಶ್,ಮಂಜುನಾಥ್, ಅರುಣ್, ಚಂದನ್, ಕೌಶಿಕ್, ಸಚಿನ್, ವಿರೆಂದ್ರ, ಸುಂದರೇಶ್, ಶೇಷಾದ್ರಿ, ಜಗದೀಶ್, ಮಧು ಚೇತನ್ ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು