News Karnataka Kannada
Sunday, April 28 2024
ಹಾಸನ

ಹಾಸನ: ಕಾಫಿ ತೋಟದಲ್ಲಿ ಮರಿ ಹಾಕಿದ ಕಾಡಾನೆ

Bengal villagers' unique experiment with villagers' tribute to wild elephants
Photo Credit : News Kannada

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಕಿರಿಹಳ್ಳಿ ಗ್ರಾಮದ ಕಾಫಿ ತೋಟದೊಳಗೆ ಕಾಡಾನೆಯೊಂದು ಮರಿ ಹಾಕಿದ ಈ ವೇಳೆ ಗಜಪಡೆಗಳು ಗೀಳಿಟ್ಟಿದ್ದು, ನಾಗರಿಕರಿಗೆ ಈ ವಿಷಯ ತಿಳಿದಿದೆ.

ಮಾಗಡಿ ಎಸ್ಟೇಟ್‌ನ ಕಾಫಿ ತೋಟಕ್ಕೆ ಬಂದಿರುವ ಕಾಡಾನೆಗಳ ಹಿಂಡು ಮರಿ ಆನೆ ಸುತ್ತ ರಕ್ಷಣೆಗಾಗಿ ನಿಂತಿವೆ. ವಿಷಯ ತಿಳಿದ ಅರಣ್ಯ ಅಧಿಕಾರಿಗಳು ತೋಟದ ಬಳಿಗೆ ಬಂದು ವೀಕ್ಷಣೆ ಮಾಡಿದ್ದು, ಕಾಫಿ ತೋಟದೊಳಗೆ ಯಾರೂ ಹೋಗದಂತೆ ಸೂಚನೆ ನೀಡಿದ್ದಾರೆ.

ಆನೆಯು ಮರಿ ಹಾಕಿದ ಸಂದರ್ಭದಲ್ಲಿ ಸೂಕ್ಷ್ಮವಾಗಿ ವರ್ತಿಸುತ್ತವೆ. ಅವುಗಳು ರಕ್ಷಣೆಗಾಗಿ ಗುಂಪಾಗಿ ಹೋಗುತ್ತವೆ. ಈ ವೇಳೆ ಯಾರಾದರೂ ಅಡ್ಡಬಂದರೆ ದಾಳಿ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಕಾಫಿ ತೋಟದೊಳಗೆ ಯಾರೂ ಸಹ ಹೋಗಬಾರದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಸೂಚನೆಯನ್ನು ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು