ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಕಿರಿಹಳ್ಳಿ ಗ್ರಾಮದ ಕಾಫಿ ತೋಟದೊಳಗೆ ಕಾಡಾನೆಯೊಂದು ಮರಿ ಹಾಕಿದ ಈ ವೇಳೆ ಗಜಪಡೆಗಳು ಗೀಳಿಟ್ಟಿದ್ದು, ನಾಗರಿಕರಿಗೆ ಈ ವಿಷಯ ತಿಳಿದಿದೆ.
ಮಾಗಡಿ ಎಸ್ಟೇಟ್ನ ಕಾಫಿ ತೋಟಕ್ಕೆ ಬಂದಿರುವ ಕಾಡಾನೆಗಳ ಹಿಂಡು ಮರಿ ಆನೆ ಸುತ್ತ ರಕ್ಷಣೆಗಾಗಿ ನಿಂತಿವೆ. ವಿಷಯ ತಿಳಿದ ಅರಣ್ಯ ಅಧಿಕಾರಿಗಳು ತೋಟದ ಬಳಿಗೆ ಬಂದು ವೀಕ್ಷಣೆ ಮಾಡಿದ್ದು, ಕಾಫಿ ತೋಟದೊಳಗೆ ಯಾರೂ ಹೋಗದಂತೆ ಸೂಚನೆ ನೀಡಿದ್ದಾರೆ.
ಆನೆಯು ಮರಿ ಹಾಕಿದ ಸಂದರ್ಭದಲ್ಲಿ ಸೂಕ್ಷ್ಮವಾಗಿ ವರ್ತಿಸುತ್ತವೆ. ಅವುಗಳು ರಕ್ಷಣೆಗಾಗಿ ಗುಂಪಾಗಿ ಹೋಗುತ್ತವೆ. ಈ ವೇಳೆ ಯಾರಾದರೂ ಅಡ್ಡಬಂದರೆ ದಾಳಿ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಕಾಫಿ ತೋಟದೊಳಗೆ ಯಾರೂ ಸಹ ಹೋಗಬಾರದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಸೂಚನೆಯನ್ನು ನೀಡಿದ್ದಾರೆ.