ಮಡಿಕೇರಿ: ಹಿಂದೂ ಧರ್ಮದ ವಿರುದ್ಧ ಪುಸ್ತಕಗಳನ್ನು ಪ್ರಕಟಿಸಿ ಪುಸ್ತಕಗಳನ್ನು ಮಡಿಕೇರಿಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಬಲವಂತವಾಗಿ ಮತಾಂತರಕ್ಕೆ ಪ್ರೇರಣೆ ನೀಡಿ ಹಿಂದೂ ಧರ್ಮಗಳ ದೇವರ ಅವಹೇಳನ ಪುಸ್ತಕವನ್ನು ಬಲವಂತವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ಹಿಂದೂ ಸಂಘಟನೆಯ ಕಾರ್ಯಕರ್ತರು ಆತನನ್ನು ವಿಚಾರಿಸಿ ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಡಿಕೇರಿಯ ಟಿ.ವಿ ಕುಮಾರ್ ಅವರು ನೀಡಿದ ದೂರಿನ ಅನ್ವಯ ಮಡಿಕೇರಿ ನಗರ ಪೊಲೀಸರು ಎಫ್ ಐ ಆರ್ 0002/2003 ದಾಖಲಿಸಿಕೊಂಡು ಆರೋಪಿ ವಿರಾಜಪೇಟೆ ಶಿವಕೇರಿ ನಿವಾಸಿ ನಿಶಾಂತ್ ಎಚ್ ಬಿ ಎಂಬುವನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಆರೋಪಿಯಿಂದ ಇಂದು ಧರ್ಮದ ವಿರುದ್ಧ ಪ್ರಕಟಿಸಲಾದ ಪುಸ್ತಕಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.