News Karnataka Kannada
Tuesday, April 30 2024
ಹಾಸನ

ಹಾಸನ: ನಾಯಿಮರಿ ಎಂಬ ಪದ ಬಳಕೆ ಮಾಡಿರುವುದು ಲೋಕ ರೂಢಿ ಮಾತು ಎಂದ ಮಹೇಶ್

The use of the word 'puppy' is a matter of common practice, says Mahesh
Photo Credit : News Kannada

ಹಾಸನ : ಮಾಜಿ ಸಿಎಂ ಸಿದ್ದರಾಮಯ್ಯ “ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ನಾಯಿಮರಿ” ಎಂಬ ಪದ ಬಳಕೆ ಮಾಡಿರುವುದು ಲೋಕ ರೂಢಿ ಮಾತಾಗಿದ್ದು ಇದಕ್ಕೆ ಅಪಾರ್ಥ ಕಲ್ಪಿಸುವುದು ಬೇಡ ಎಂದು ಕಾಂಗ್ರೆಸ್ ಮುಖಂಡ ಹೆಚ್.ಕೆ ಮಹೇಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ಮೋದಿ ಎದುರು ನಾಯಿಮರಿ ಯಂತೆ ನಿಲ್ಲುತ್ತಾರೆ ಎಂದು ಸಿದ್ದ ಹೇಳಿಕೆಯನ್ನು ನೀಡಿದ್ದರು ಆದರೆ ಅವರು ಲೋಕ ರೂಢಿ ಮಾತಾಗಿ ಮೋದಿ ಎದುರು ಬೊಮ್ಮಾಯಿ ಹೆದರಿಕೆಯಿಂದ ನಿಲ್ಲುತ್ತಾರೆ ಅದಕ್ಕಾಗಿ ಆ ಪದ ಬಳಕೆ ಮಾಡಿದ್ದೇನೆ ಎಂದು ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಆದರೆ ಹಾಸನದ ಶಾಸಕ ರಾದ ಪ್ರೀತಮ್ ಗೌಡ ಇದೀಗ ಸಿದ್ದರಾಮಯ್ಯ ಅವರು ಕ್ಷಮೆ ಕೇಳಬೇಕು ಎಂದು ಹೇಳುತ್ತಿರುವುದನ್ನು ನೋಡಿದರೆ ಅಚ್ಚರಿ ಮೂಡಿಸಿದೆ ಎಂದರು.

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಪ್ರೀತಂ ಗೌಡ ಯಾವುದೇ ಕಾರ್ಯಕ್ರಮ ಮಾಡಿದರು ಸಹ ಅವರಿಗೆ ಸಹಾಯ ಮಾಡಿದ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಭಾವಚಿತ್ರ ಮಾತ್ರ ಫ್ಲಕ್ಸ್ ಬ್ಯಾನರ್ ನಲ್ಲಿ ಇರು ತ್ತದೆ ಆದರೆ ಬಿಜೆಪಿ ರಾಜ್ಯಾಧ್ಯ ಕ್ಷರು ಮುಖ್ಯಮಂತ್ರಿಗಳು ಹಾಗೂ ದೇಶದ ಪ್ರಧಾನಿ ಮೋದಿ ಅವರ ಭಾವಚಿತ್ರವೇ ಅವರ ಬ್ಯಾನರ್ ಗಳಲ್ಲಿ ಇರುವುದಿಲ್ಲ ಹೀಗಿರು ವಾಗ ಸಿದ್ದ ರಾಮಯ್ಯ ಅವರು ಟೀಕಿಸಿರುವ ವಿಚಾರದಲ್ಲಿ ಪ್ರೀತ ಮ್ ಗೌಡ ಮಾತನಾಡುತ್ತಿರುವುದು ಹಾಸ್ಯಾ ಸ್ಪದವಾಗಿದೆ ಎಂದು ಟೀಕಿಸಿದರು.

ಹಾಸನದಲ್ಲಿ “ಪ್ರೀತಂ ಬಿಜೆಪಿ” ಅಸ್ತಿತ್ವದಲ್ಲಿದ್ದು ಭಾರ ತೀಯ ಜನತಾ ಪಾರ್ಟಿ ಎನ್ನು ಪ್ರೀತಮ್ ಗೌಡ ಅವರು ಪ್ರತಿ ನಿಧಿಸುತ್ತಿಲ್ಲ ಎಂಬ ಅನುಮಾನ ವ್ಯಕ್ತವಾಗಿದೆ ಎಂದರು.

ಬಸವರಾಜ ಬೊಮ್ಮಾಯಿ ಅವರು ಮಹಾರಾಷ್ಟ್ರ ಕರ್ನಾಟಕ ಗಡಿ ವಿಚಾರವಾಗಿ, ಮಹದಾಯಿ ನದಿ ನೀರು ಹಂಚಿಕೆ, ಕೇಂದ್ರ ಸರ್ಕಾರದಿಂದ ಬರುವ ಜಿ ಎಸ್ ಟಿ ವಿಚಾರವಾಗಿ ಚರ್ಚಿಸಲು ಸರ್ವ ಪಕ್ಷಗಳ ನಿಯೋಗವನ್ನು ಪ್ರಧಾನಿ ಮೋದಿ ಬಳಿ ಕರೆದು ಕೊಂಡು ಹೋಗಿ ಎಂದರು ಸಹ ಹಿಂಜರಿಯುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿ ಸಿದ್ದರಾಮಯ್ಯ ಅವರು ಸಿಎಂ ಅವರು ನಾಯಿಮರಿಯಂತೆ ಹೆದರುತ್ತಾರೆ ಎಂದು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಪ್ರೀತಂ ಗೌಡ ಅವರು ಈ ರೀತಿ ಬಿಜೆಪಿ ನಾಯಕರ ಹಾಗೂ ಪ್ರಧಾನಿಗಳ ಭಾವಚಿತ್ರವನ್ನು ಬಳಸದೆ ಕಾರ್ಯಕ್ರಮಗಳನ್ನು ಮಾಡುತ್ತಿರುವುದನ್ನು ಗಮನಿಸಿ ದರೆ ಕಾಂಗ್ರೆಸ್ ಪಕ್ಷದ ಕದ ತಟ್ಟು ತ್ತಿದ್ದಾರೆ ಎಂದೆನಿಸುತ್ತಿದೆ ಎಂದು ಟೀಕಿಸಿದ ಅವರು ಇಡೀ ರಾಜ್ಯ ದಲ್ಲಿ ೪೦ ಪರ್ಸೆಂಟ್ ಕಮಿಷನ್ ಸದ್ದು ಮಾಡುತ್ತಿದ್ದರೆ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ೫೦ ಪ್ರತಿಶತ ಕಮಿಷನ್ ಸದ್ದು ಕೇಳುತ್ತಿದೆ. ಕಾಂಕ್ರೀಟ್ ರಸ್ತೆಯನ್ನು ಮಾಡಿ ಇದೀಗ ಅದರ ಮೇಲೆ ಡಾಂಬರ್ ಹಾಕುತ್ತಿರುವುದನ್ನು ಗಮನಿಸಿದರೆ ಯಾವ ರೀತಿಯ ಆಡಳಿತ ಇಲ್ಲಿ ನಡೆಯುತ್ತಿದೆ ಎಂಬುದನ್ನು ಕಾಣಬಹುದು.

ಬೆಂಗಳೂರಿಗೆ ಹೋದರೆ ಹಾಸನದ ಶಾಸಕರು ಸಾವಿರಾರು ಕೋಟಿ ಹಣ ಮಾಡಿದ್ದಾರೆ ಎಂದು ಹೇಳುತ್ತಿರುವುದನ್ನು ಗಮನಿಸಿದರೆ ಕ್ಷೇತ್ರದಲ್ಲಿ ಯಾವ ಮಟ್ಟಿಗೆ ಅಭಿವೃದ್ಧಿ ಆಗುತ್ತಿದೆ ಎಂದು ತಿಳಿಯಬಹುದು ಎಂದು ಆರೋಪಿಸಿದರು. ವಿನೋದ್ ,ಅಮಿರ್ ಜಾನ್, ರಾಮಚಂದ್ರ, ಹೇಮಂತ್ ,ಚಂದ್ರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು