ಹಾಸನ: ಕಾಮಗಾರಿಗಳು ಪೂರ್ಣ ಆಗದೆ ಇದ್ದರು ರಾಜಕೀಯ ಹಿತಾಸಕ್ತಿಗೆ ಶಾಸಕ ಪ್ರೀತಂ ಗೌಡ ಅವರು ನಗರದಲ್ಲಿ ಅನೇಕ ಕಟ್ಟಡ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿರು ವುದು ಸರಿಯಲ್ಲ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಅಗಿಲೆ ಯೋಗೀಶ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ೫೦ ಸಾವಿರ ಲೀಡ್ ನಲ್ಲಿ ಗೆಲ್ಲುವೆ ಎಂದು ಪಂಥಾಹ್ವಾನ ನೀಡುವ ಶಾಸಕ ಪ್ರೀತಂ ಗೌಡ ಮಹಿಳಾ ಮತದಾರರಿಗೆ ಅಷ್ಟ ಲಕ್ಷ್ಮಿ ಪೂಜೆ ಹೆಸರಿನಲ್ಲಿ ಬೆಳ್ಳಿ ಎಂದು ಹೇಳಿ ಲೋಹದ ಲಕ್ಷ್ಮಿ ಫೋಟೋ ನೀಡಿ ವಂಚಿಸಿದ್ದಾರೆ ಎಂದು ದೂರಿದರು.
ಜಿಲ್ಲಾಡಳಿತದ ಆದೇಶ ಧಿಕ್ಕರಿಸಿ ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಿಸಿರುವ ಕಾಮಗಾರಿಗೆ ಶಾಸಕ ಗೌಡ ಅವರು ಹೆಸರು ಹಾಕಿಸಿಕೊಂಡಿರುವ ಫ್ಲೆಕ್ಸ್, ಮತ್ತು ಬ್ಯಾನರ್ ಹಾಗೂ ನಾಮಫಲಕಗ ಳನ್ನು ಆಮ್ ಆದ್ಮಿ ಪಕ್ಷದ ವತಿಯಿಂದ ತೆರವು ಗೊಳಿಸಲಿದ್ದೇವೆ ಎಂದು ಎಚ್ಚರಿಸಿದರು.
ಶಾಸಕರು ಅರ್ಧ ಆಗಿರುವ ಕಾಮಗಾರಿಗಳಿಗೆ ತರಾತುರಿಯಲ್ಲಿ ಉದ್ಘಾಟನೆಗೆ ಮುಂದಾಗಿದ್ದಾರೆ ಎಂಬ ವಿಷಯವನ್ನು ಮನಗಂಡು ಇಬ್ಬರು ಸಚಿವರನ್ನು ಹೊರತು ಪಡಿಸಿ ಮುಖ್ಯಮಂತ್ರಿ ಆದಿಯಾಗಿ ಯಾವುದೇ ಸಚಿವರು ಕಾರ್ಯ ಕ್ರಮಕ್ಕೆ ಆಗಮಿಸಿಲ್ಲ, ಹಾಸನ ಕ್ಷೇತ್ರದ ಜನರು ಇನ್ನಾದರೂ ಎಚ್ಚೆತ್ತು ಕೊಂಡು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಅಗತ್ಯ ಇದೇ ಎಂದರು.
ಚುನಾವಣೆಯಲ್ಲಿ ಸೋಲುವ ಭೀತಿಯಿಂದ, ಹಾಗೂ ಮುಂದಿನ ಚುನಾವಣೆಯಲ್ಲಿ ಶಾಸಕನಾಗಿ ಆಯ್ಕೆ ಯಾಗುವುದಿಲ್ಲ ಎಂಬ ವಿಷಯವನ್ನು ಮನಗಂಡು ಪೂರ್ಣವಾಗದ ಕಾಮ ಗಾರಿಗೆ ಅಡಿಗಲ್ಲು ಹಾಕುವ ಕೆಲಸ ಮಾಡು ತ್ತಿದ್ದಾರೆ, ಒಬ್ಬ ಜನಪ್ರತಿನಿಧಿ ಯಾಗಿ ಈ ರೀತಿ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದರು.
ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಸಾರ್ವಜನಿಕರ ಹಣದಲ್ಲಿ ನಿರ್ಮಿಸಿರುವ ಕಾಮ ಗಾರಿಗೆ ಅಳವಡಿಸಿರುವ ನಾಮ ಫಲಕವನ್ನು ತೆರವು ಗೊಳಿಸಿ ನಿರ್ಧಕ್ಷಿಣ್ಯ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ಎಎಪಿ ಯಿಂದ ತೆರವು ಮಾಡಲಿದ್ದೇವೆ ಎಂದು ಎಚ್ಚರಿಸಿದರು.
ಆಮ್ ಆದ್ಮಿ ಪಕ್ಷದ ಮುಖಂಡರಾದ ಆನಂದ್, ಧಸ್ಥಗಿರ್, ರೆಹಮತ್, ಸಫಿ, ಇತರರು ಇದ್ದರು