News Karnataka Kannada
Thursday, May 02 2024
ಹಾಸನ

ಹಾಸನ: ಮಂಗಳಾ ಆಸ್ಪತ್ರೆಗೆ ೮ ಲಕ್ಷ ದಂಡ ವಿಧಿಸಿ ಆದೇಶ

Hassan: Mangala Hospital fined Rs 8 lakh
Photo Credit : News Kannada

ಹಾಸನ: ಹಾಸನದ ಉದಯಗಿರಿ ಬಡಾವಣೆ ನಿವಾಸಿಯಾದ ಎ.ಎನ್ ರುಕ್ಕಿಣಿಯವರು ಜಠರದ ಅಸ್ವಸ್ಥತೆ ಹಾಗೂ ಗರ್ಭಾಶಯದಲ್ಲಿನ ಫೈಬ್ರಾಯ್ಡ್ ಚಿಕಿತ್ಸೆಗಾಗಿ ಹಾಸನದ ಮಂಗಳ ಆಸ್ಪತ್ರೆಗೆ ದಾಖಲಾಗಿದ್ದು, ತಮ್ಮ ದೇಹದಲ್ಲಿನ ಸಕ್ಕರೆ ಅಂಶದ ಮಟ್ಟ ಹೆಚ್ಚಾಗಿದ್ದರೂ ಸಹಾ ಸರಿಯಾಗಿ ನಿಗಾವಹಿಸಿ ಪರೀಕ್ಷಿಸದೆ ಶಸ್ತ್ರಚಿಕಿತ್ಸೆ ಮಾಡಿದ ನಂತರದಲ್ಲಿ ಎಡಕೈಗೆ ಡಿಪ್ ಹಾಕಿದ್ದರ ಪರಿಣಾಮದಿಂದ ಊತ ಕಂಡುಬಂದಿದ್ದು ಈ ಬಗ್ಗೆ ಆಸ್ಪತ್ರೆಯ ವೈದ್ಯರಿಗೆ ತಿಳಿಸಲಾಗಿ ಮುಲಾಮು ಹಚ್ಚುವಂತ ಸಲಹೆ ನೀಡಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಿರುತ್ತಾರೆ.

ಚಿಕಿತ್ಸೆಗೆ ಮುನ್ನ ಮುನ್ನೆಚ್ಚರಿಕೆ ಕ್ರಮವಾಗಿ ಸರಿಯಾಗಿ ತಪಾಸಣೆ ಮಾಡದೆ ನಿರ್ಲಕ್ಷ್ಯ ಮಾಡಿ ಎಡಕೈಗೆ ಡ್ರಿಪ್ ಹಾಕಿದ್ದರ ಪರಿಣಾಮದಿಂದ ಊತ ಮತ್ತು ಗಾಯ ಉಂಟಾಗಿ ಹೆಚ್ಚಿನ ಚಿಕಿತ್ಸೆಗಾಗಿ ಅಪಾರ ಹಣ ಖರ್ಚಾಗಿರುವುದೇ ಅಲ್ಲದೆ ಎಡಕೈಗೆ ಶಾಶ್ವತನ ಉಂಟಾಗಿರುತ್ತದೆ.

ಇದಕ್ಕೆಲ್ಲಾ ಮಂಗಳಾ ಆಸ್ಪತ್ರೆಯವರ ನಿರ್ಲಕ್ಷ್ಯದಿಂದ ಆದ ಸೇವಾನ್ಯೂನತೆ ಕಾರಣ ಆಗಿರುತ್ತದೆ ಎಂದು ಆರೋಪಿಸಿ ಪರಿಹಾರಕ್ಕಾಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರದ ಆಯೋಗಕ್ಕೆ ಸಿ.ಸಿ.೧೨೨/೨೦೧೭ ರಡಿ ದೂರನ್ನು ಸಲ್ಲಿಸಿದ್ದು ಘನ ಆಯೋಗದ ಅಧ್ಯಕ್ಷರಾದಂತಹ ಚಂಚಲ ಸಿ.ಎಂ ಹಾಗೂ ಸದಸ್ಯರುಗಳಾದ ಹೆಚ್.ವಿ ಮಹಾದೇವ ಮತ್ತು ಅನುಪಮಾ. ಆರ್ ಇವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿ ಆಸ್ಪತ್ರೆಯವರ ವೈದ್ಯಕೀಯ ಲಕ್ಷ ರೂಪಾಯಿಗಳನ್ನು ನಿರ್ಲಕ್ಷ್ಯದಿಂದ ಸೇವಾನ್ಯೂನತೆ ಉಂಟಾಗಿರುತ್ತದೆ ಎಂದು ನಿರ್ಣಯಿಸಿ ೮ ಫಿರ್ಯಾದು ದಾಖಲಿಸಿದ ದಿನಾಂಕದಿಂದ ಸಾ.ಶೇ.೯% ಬಡ್ಡಿಯೊಂದಿಗೆ ಎದುರುದಾರರಾದ ಮಂಗಳ ಆಸ್ಪತ್ರೆಯವರು ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರದ ಆಯೋಗ ಅಧ್ಯಕ್ಷರಾದಂತಹ ಚಂಚಲ, ಸಿ.ಎಂ ರವರು ತೀರ್ಪ ನೀಡಿರುತ್ತಾರೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರದ ಆಯೋಗದ ಸಹಾಯಕ ರಿಜಿಸ್ಟ್ರಾರ್ ಮತ್ತು ಸಹಾಯಕ ಆಡಳಿತಾಧಿಕಾರಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು