News Karnataka Kannada
Tuesday, May 07 2024
ಹಾಸನ

ಬೇಲೂರು: ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಕಾಂಗ್ರೆಸ್-ಜೆಡಿಎಸ್, ಆರೋಪ

Belur: Congress-JD(S) accuse bjp of cooking up political pulses
Photo Credit : News Kannada

ಬೇಲೂರು: ರಾಷ್ಟ್ರ ಪ್ರಧಾನ ಕಾರ್ಯದರ್ಶಿ ವಿರುದ್ಧ ಜಾತಿ ಜಾತಿಗಳನ್ನು ಎತ್ತಿಕಟ್ಟುವ ಮೂಲಕ ಅವರನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ತಾಲೂಕು ಯುವ ಮೋರ್ಚ ಅಧ್ಯಕ್ಷ ನವಿಲಹಳ್ಳಿ ಸುಮನ್ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ಪತ್ರಿಕೆಯಲ್ಲಿ ಬಂದಿದೆ ಎಂಬ ರೀತಿಯಲ್ಲಿ ಸುಳ್ಳು ಸುದ್ದಿ ಸೃಷ್ಟಿಸುವ ಮೂಲಕ ಲಿಂಗಾಯತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವು ಹಬ್ಬಿಸುವ ಮೂಲಕ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದೆ.

ಒಬ್ಬ ದಕ್ಷ ಪ್ರಾಮಾಣಿಕ ಹಿಂದೂಗಳ ಪರವಾಗಿ ಹೋರಾಟ ಮಾಡುವಂತಹ ವ್ಯಕ್ತಿತ್ವ ಇರುವ ಸಿಟಿ ರವಿ ಅವರ ವಿರುದ್ಧ ಇಲ್ಲ ಸಲ್ಲದ ಹೇಳಿಕೆ ಹಾಗೂ ಸಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಇದು ಬಿಜೆಪಿ ಪಕ್ಷ ಜಾತ್ಯಾತೀತವಾದ ಪಕ್ಷವಾಹಿದ್ದು ಇಲ್ಲಿ ಎಲ್ಲಾ ಜಾತಿ ಜನಾಂಗದವರು ಸಹ ಕಟ್ಟಿದಂತಹ ಶಿಸ್ತಿನ ಪಕ್ಷವಾಗಿದೆ.

ಬಹುಪಾಲು ವೀರಶೈವರೇ ಹೆಚ್ಚಿನ ಒಲವು ಬಿಜೆಪಿ ಪಕ್ಷದ ಕಡೆ ಇರುವುದರಿಂದ ಹಾಗೂ ನಮ್ಮ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅವರ ಬೆಳವಣಿಗೆ ಸಹಿಸದೆ ಕೆಲವರು ಈ ರೀತಿ ಷಡ್ಯಂತ್ರ ನಡೆಸುತ್ತಿದ್ದಾರೆ ಇದಕ್ಕೆ ಯಾರೂ ಕೂಡ ಕಿವಿಗೊಡ ಬಾರದು ಎಂದು ಮನವಿ ಮಾಡಿದರು.

ನಾಗೇನಹಳ್ಳಿ ಶಕ್ತಿ ಕೇಂದ್ರದಪ್ರಧಾನ ಕಾರ್ಯದರ್ಶಿ ವಿನಯ್ ಮಾತನಾಡಿ ನಮ್ಮ ತಾಲೂಕು ಮಂಡಳದಲ್ಲಿ ವೀರಶೈವ ಲಿಂಗಾಯತರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅವರ ಮತ ಸೆಳೆಯಲು ಈ ರೀತಿಯಾಗಿ ಎರಡೂ ವಿರೋಧ ಪಕ್ಷಗಳು ಷಡ್ಯಂತ್ರ ರೂಪಿಸಿದೆ.

ಸಿಟಿ ರವಿ ಯವರು ಒಂದು ಜಾತಿಯ ಪರವಾಗಿ ಎಂದೂ ಸಹ ಧ್ವನಿ ಎತ್ತಿದವರಲ್ಲಾ ಎಲ್ಲಾ ಜಾತಿ ಜನಾಂಗದ ಜೊತೆ ಅತ್ಯುತ್ತಮ ಒಡನಾಟ ಇಟ್ಟಿರುವ ಅವರ ವ್ಯಕ್ತಿತ್ವಕ್ಕೆ ಇಂತಹ ಸುಳ್ಳು ಸುದ್ದಿ ಯಿಂದ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ.ಇದಕ್ಕೆ ಯಾರೂ ಮಾನ್ಯತೆ ನೀಡಬಾರದು ಎಂದರು.

ಈ ಸಂದರ್ಭದಲ್ಲಿ ಯಮಸಂಧಿ ಶಕ್ತಿ ಕೇಂದ್ರದ ಅಧ್ಯಕ್ಷ ಯಶವಂತ್ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು