News Karnataka Kannada
Sunday, May 05 2024
ಚಾಮರಾಜನಗರ

ಚಾಮರಾಜನಗರ: ಕೆರೆ ಒಡೆದು ಕೃಷಿ ಫಸಲು ನಾಶ

A lake in Chamarajanagar has been breached and crops destroyed.
Photo Credit : By Author

ಚಾಮರಾಜನಗರ: ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು, ಕೆರೆ ಏರಿ ಒಡೆದ ಪರಿಣಾಮ ನೂರಾರು ಎಕರೆ ಕೃಷಿ ಪ್ರದೇಶಕ್ಕೆ ನೀರು‌ ನುಗ್ಗಿ ಅವಾಂತರ ಸೃಷ್ಟಿಯಾಗಿರುವ ಘಟನೆ ಯಳಂದೂರು ತಾಲೂಕಿನ‌ ಯರಗಂಬಳ್ಳಿಯಲ್ಲಿ ನಡೆದಿದೆ.

ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಯರಗಂಬಳ್ಳಿ ಮತ್ತು ಗಂಗವಾಡಿ ಗ್ರಾಮಕ್ಕೆ ಹೋಗುವ ಮಧ್ಯ ಇರುವ ಹುಳುಗೆರೆ ಕೆರೆ ಭರ್ತಿಯಾಗಿ ಏರಿ ಒಡೆದು ಜಮೀನುಗಳಿಗೆ ನೀರು ನುಗ್ಗಿದೆ. ನೀರಿನ ರಭಸಕ್ಕೆ ನಾಟಿ ಮಾಡಿದ ಭತ್ತ, ರಾಗಿ, ಕಬ್ಬು ಹಾಗೂ ತೆಂಗಿನ ಸಸಿಗಳು ನಾಶವಾಗಿದೆ. ವ್ಯವಸಾಯಕ್ಕೆ ಖರ್ಚು ಮಾಡಿದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ನಂಜನಾಯಕ ಎಂಬುವರು ಸಾಕಿದ್ದ 50ಕ್ಕೂ ಹೆಚ್ಚು ಕುರಿ, ಕೋಳಿಗಳೂ ಕೂಡ ನೀರಿನಲ್ಲಿ ಕೊಚ್ಚಿ ಹೋಗಿವೆ.

ಚಾಮರಾಜನಗರ ತಾಲೂಕಿನ ನಲ್ಲೂರುಮೋಳೆ ಗ್ರಾಮ ಅಕ್ಷರಶಃ ಕೆರೆಯಾಗಿದೆ. ಕೆರೆಯ ನೀರು ಊರಿನ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಜಾನುವಾರು ಕೊಟ್ಟಿಗೆಗಳಿಗೆ ಹಾನಿಯಾಗಿದೆ. ಚಾಮರಾಜನಗರ ತಾಲೂಕಿನ ಅಮ್ಮನಪುರ ಕೆರೆ ಬರೋಬ್ಬರಿ 30 ವರ್ಷಗಳ ಬಳಿಕ ತುಂಬಿ‌ ಕೋಡಿ ಬಿದ್ದಿದೆ. ರಸ್ತೆ ಮೇಲೆ ನೀರು ಹರಿಯುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಯಳಂದೂರು ತಾಲೂಕಿನ ಕಂದಹಳ್ಳಿ, ಗಣಿಗನೂರು, ಯರಿಯೂರು, ಅಂಬಳೆ ಹಾಗೂ ಮದ್ದೂರು ಗ್ರಾಮಗಳ ಸುತ್ತಮುತ್ತಲಿನ ಕೃಷಿ ಭೂಮಿಗಳಲ್ಲಿ ನೀರು ಹರಿಯುತ್ತಿದ್ದು, ಫಸಲು ನಾಶವಾಗುವ ಆತಂಕ ಸೃಷ್ಟಿಸಿದೆ. ಹಲವು ಮನೆಗಳಿಗೂ ನೀರು ನುಗ್ಗಿದೆ. ಭಾರಿ ಪ್ರಮಾಣದಲ್ಲಿ ಜಲಾಶಯಗಳಿಗೆ  ನೀರು ಹರಿದು ಬರುತ್ತಿರುವುದರಿಂದ ಸುರಕ್ಷತೆ ದೃಷ್ಟಿಯಿಂದ ಸುವರ್ಣಾವತಿ ಜಲಾಶಯದಿಂದ 1,400 ಕ್ಯುಸೆಕ್‌ ಹಾಗೂ ಚಿಕ್ಕಹೊಳೆ ಜಲಾಶಯದಿಂದ 200 ಕ್ಯುಸೆಕ್‌ ನೀರು ಹೊರ ಬಿಡಲಾಗುತ್ತಿದೆ.‌

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು