ಬೆಳ್ತಂಗಡಿ: ತಾಲೂಕಿನಲ್ಲಿ ಗುರುವಾರವು ವಿಪರೀತ ಮಳೆ ಮುಂದುವರಿದಿದೆ. ಭಾರಿ ಪ್ರಮಾಣದಲ್ಲಿ ಮಳೆ ಸುರಿದ ಕಾರಣ ನದಿಗಳ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ. ಮಳೆ ಜತೆ ಗಾಳಿಯು ಬೀಸಿದ್ದು ಅಲ್ಲಲ್ಲಿ ಅಡಕೆ ಹಾಗೂ ರಬ್ಬರ್ ಗಿಡಗಳು ಮುರಿದು ಬಿದ್ದಿವೆ.
ಮಲವಂತಿಗೆ ಗ್ರಾಮದ ಕುರುಬರ ಗುಡ್ಡೆ ಎಂಬಲ್ಲಿ ಪ್ರೇಮಾ ರಾಜು ದೇವಾಡಿಗ ಅವರ ವಾಸದ ಮನೆ ಕುಸಿದು ಹಾನಿಯಾಗಿದೆ. ಸ್ಥಳಕ್ಕೆ ಪಂಚಾಯಿತಿ ಉಪಾಧ್ಯಕ್ಷ ದಿನೇಶ್ ಗೌಡ, ಸದಸ್ಯರು ಹಾಗೂ ಸ್ಥಳೀಯರು ಭೇಟಿ ನೀಡಿ ತಾತ್ಕಾಲಿಕವಾಗಿ ತಾರ್ಪಾಲು ಹೊದಿಸಿ ಹೆಚ್ಚಿನ ಕುಸಿತ ಉಂಟಾಗದಂತೆ ಮುನ್ನೆಚ್ಚರಿಕೆ ಕೈಗೊಂಡಿದ್ದಾರೆ.
ಮಿತ್ತಬಾಗಿಲು ಸಮೀಪದ ಕಿಲ್ಲೂರು ಎಂಬಲ್ಲಿ ಅಂಗನವಾಡಿ ಶಾಲೆಯ ಪಕ್ಕದ ಗುಡ್ಡ ಕುಸಿತಗೊಂಡಿದೆ.