ಮಂಗಳೂರು: ಕೆಲವು ದಿನಗಳ ಹಿಂದೆ ಮಂಗಳೂರು ನಗರದಲ್ಲಿ ಬಿರುಸಿನ ಮಳೆಯಾಗಿ ಆವಾಂತರ ಸೃಷ್ಟಿಯಾಗಿತ್ತು ಹೆಚ್ಚಿನ ಕಡೆಗಳಲ್ಲಿ ರಾಜಕಾಲುವೆ ಅವ್ಯವಸ್ಥೆಯಿಂದಾಗಿ ಈ ಸಮಸ್ಯೆ ಉದ್ಭವಿಸಿದ್ದು ಇದೀಗ ಆದ್ಯತೆ ಮೇರೆಗೆ ನಗರದ ಕೆಲವು ರಾಜಕಾಲುವೆಗಳಲ್ಲಿ ಮತ್ತೆ ಹೂಳೆತ್ತಲು ಪಾಲಿಕೆ ಮುಂದಾಗಿದೆ .
ಕೆಲವು ದಿನಗಳ ಹಿಂದೆ ನಗರದಲ್ಲಿ ಸುರಿದ ಬಿರುಸಿನ ಮಳೆಗೆ ಪಾಂಡೇಶ್ವರ ಸುಭಾಶ್ ನಗರ ,ಶಿವನಗರ ,ಪಡಿಲ್ ,ಸಹಿತ ಸುತ್ತಲಿನ ಪರಿಸರದಲ್ಲಿ ಆವಾಂತರ ಸೃಷ್ಟಿಯಾಗಿತ್ತು. ರಾಜಕಾಲುವೆಯಲ್ಲಿ ಹೂಳು ಪ್ಲಾಸ್ಟಿಕ್ ತ್ಯಾಜ್ಯ ತುಂಬಿ ನೀರು ಸರಾಗವಾಗಿ ಹರಿಯದೆ ಸುತ್ತಮುತ್ತಲು ನೆರೆಗೆ ಕಾರಣವಾಗಿತ್ತು ಇದೀಗ ಮುಂಜಾಗ್ರತೆ ದೃಷ್ಟಿಯಿಂದ ಆ ಭಾಗದ ರಾಜ ಕಾಲುವೆಗಳ ಹೂಳೆತ್ತಲು ಪಾಲಿಕೆ ತಯಾರಿ ನಡೆಸಿದೆ.