News Karnataka Kannada
Saturday, May 04 2024
ಮೈಸೂರು

ಸುತ್ತೂರು ಮಠಕ್ಕೆ ಭೇಟಿ ನೀಡಿದ ಸಿಎಂ

Basavaraj Bommaih V Ponnuraj 01082021
Photo Credit :
ಮೈಸೂರು : ಮುಖ್ಯಮಂತ್ರಿ ಗದ್ದುಗೆ ಏರಿದ  ಬಳಿಕ ಸಂಪುಟ ರಚನೆ, ಖಾತೆ ಹಂಚಿಕೆ, ಕೊರೊನಾ, ಪ್ರವಾಹ ಹೀಗೆ ಸಾಲು ಸಾಲು ಸವಾಲುಗಳನ್ನು ಎದುರಿಸಿದ  ಬಸವರಾಜ ಬೊಮ್ಮಾಯಿ ಅವರು  ಸೋಮವಾರ ಕೊಂಚ ರಿಲ್ಯಾಕ್ಸ್‌ ಪಡೆದುಕೊಂಡರು .

ಸೋಮವಾರ ಮೈಸೂರು ಪ್ರವಾಸದ್ಲಲಿದ್ದ  ಅವರು ಅಧಿಕೃತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಬಳಿಕ ಸಂಜೆ ಶ್ರೀಕ್ಷೇತ್ರ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು . ತಮ್ಮ ಸಂಪುಟದ ಹಲವು ಸದಸ್ಯರೊಂದಿಗೆ ಆಗಮಿಸಿದ ಅವರು, ಮಠದಲ್ಲಿ ಊಟ ಮಾಡಿ, ವಿಶ್ರಾಂತಿ ಪಡೆದುಕೊಂಡರು.

ಸಿಎಂ  ಆದ ಬಳಿಕ ಬೊಮ್ಮಾಯಿ ಅವರ ಮೊದಲ ಮೈಸೂರು ಪ್ರವಾಸ ಇದಾಗಿದ್ದು, ಮಠಕ್ಕೆ ಆಗಮಿಸಿದ ಅವರಿಗೆ  ಪೂರ್ಣ ಕುಂಭ ಸ್ವಾಗತ ಸಿಕ್ಕಿತು . ಬಳಿಕ ಶಿವರಾತ್ರೇಶ್ವರ ಶಿವಯೋಗಿಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು. ಈ ವೇಳೆ ಅವರಿಗೆ ಸಚಿವರಾದ ಸುಧಾಕರ್ , ಮುನಿರತ್ನ , ಎಸ್. ಟಿ. ಸೋಮಶೇಖರ್ ,ಭೈರತಿ ಬಸವರಾಜು , ವಿ. ಸೋಮಣ್ಣ , ಮುರುಗೇಶ್ ನಿರಾಣಿ , ನಾರಾಯಣ ಗೌಡ ಸಾಥ್ ಕೊಟ್ಟರು . ಜೊತೆಗೆ ಶಾಸಕ ರೇಣುಕಾಚಾರ್ಯ ಕೂಡ ಇದ್ದರು. . ಶ್ರೀಗಳ ಆಶೀರ್ವಾದ ಪಡೆದ ನಂತರ ಸಿಎಂ ಶ್ರೀಗಳ ಜತೆ ಪ್ರಸಕ್ತ ವಿದ್ಯಮಾನ ಗಳ ಬಗ್ಗೆ ಸಮಾಲೋಚನೆ ನಡೆಸಿದರು.

ಇನ್ನು ಸಿಎಂ ಹಾಗೂ ಸಚಿವರು ಅಗಮಿಸಿದ್ದರಿಂದ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಪೂರಿ, ಕಾಳಿನ ಸಾಂಬಾರ್ ,ಪಲ್ಯ ,ಅನ್ನ ಸೇರಿ ಬಗೆಬಗೆಯ ಭಕ್ಷ್ಯಗಳನ್ನ ತಯಾರಿಸಲಾಗಿತ್ತು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು