ಸೋಮವಾರ ಮೈಸೂರು ಪ್ರವಾಸದ್ಲಲಿದ್ದ ಅವರು ಅಧಿಕೃತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಬಳಿಕ ಸಂಜೆ ಶ್ರೀಕ್ಷೇತ್ರ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು . ತಮ್ಮ ಸಂಪುಟದ ಹಲವು ಸದಸ್ಯರೊಂದಿಗೆ ಆಗಮಿಸಿದ ಅವರು, ಮಠದಲ್ಲಿ ಊಟ ಮಾಡಿ, ವಿಶ್ರಾಂತಿ ಪಡೆದುಕೊಂಡರು.
ಸಿಎಂ ಆದ ಬಳಿಕ ಬೊಮ್ಮಾಯಿ ಅವರ ಮೊದಲ ಮೈಸೂರು ಪ್ರವಾಸ ಇದಾಗಿದ್ದು, ಮಠಕ್ಕೆ ಆಗಮಿಸಿದ ಅವರಿಗೆ ಪೂರ್ಣ ಕುಂಭ ಸ್ವಾಗತ ಸಿಕ್ಕಿತು . ಬಳಿಕ ಶಿವರಾತ್ರೇಶ್ವರ ಶಿವಯೋಗಿಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು. ಈ ವೇಳೆ ಅವರಿಗೆ ಸಚಿವರಾದ ಸುಧಾಕರ್ , ಮುನಿರತ್ನ , ಎಸ್. ಟಿ. ಸೋಮಶೇಖರ್ ,ಭೈರತಿ ಬಸವರಾಜು , ವಿ. ಸೋಮಣ್ಣ , ಮುರುಗೇಶ್ ನಿರಾಣಿ , ನಾರಾಯಣ ಗೌಡ ಸಾಥ್ ಕೊಟ್ಟರು . ಜೊತೆಗೆ ಶಾಸಕ ರೇಣುಕಾಚಾರ್ಯ ಕೂಡ ಇದ್ದರು. . ಶ್ರೀಗಳ ಆಶೀರ್ವಾದ ಪಡೆದ ನಂತರ ಸಿಎಂ ಶ್ರೀಗಳ ಜತೆ ಪ್ರಸಕ್ತ ವಿದ್ಯಮಾನ ಗಳ ಬಗ್ಗೆ ಸಮಾಲೋಚನೆ ನಡೆಸಿದರು.