ಮೈಸೂರು- ಕೊರೊನಾ ಆರ್ಭಟಕ್ಕೆ ಬ್ರೇಕ್ ಹಾಕಲು ಸರ್ಕಾರ ಜಾರಿಗೊಳಿಸಿರುವ ವೀಕೆಂಡ್ ಲಾಕ್ ಡೌನ್ ಗೆ ಮೈಸೂರು ಜನರು ಡೋಂಟ್ ಕೇರ್ ಎಂದಿದ್ದಾರೆ. ಇದರಿಂದ ಕೆಲವು ಅಂಗಡಿ ಮುಂಗಟ್ಟ ಮುಚ್ಚಿದ್ದರೆ, ಇನ್ನು ಹಲವು ವ್ಯಾಪಾರ ವಹಿವಾಟು ಎಂದಿನಂತೆ ನಡೆಯುತ್ತಿದೆ.
ಇನ್ನು ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ ಎಣ್ಣೆ ಪಾರ್ಟಿ ಜೋರಾಗಿದೆ. ಮೈಸೂರಿನ ಬಂಬೂ ಬಜಾರ್, ಮಂಡಿ ಮೊಹಲ್ಲಾ, ಸಯ್ಯಾಜಿರಾವ್ ರಸ್ತೆ ಸೇರಿದಂತೆ ಹಲವು ಕಡೆ ಮದ್ಯ ಪ್ರಿಯರು ಮತ್ತೇರಿಸಿಕೊಳ್ಳುತ್ತಿದ್ದಾರೆ. ದಟ್ಟ ಮೋಡದ ವಾತಾವರಣ, ಚುಮು ಚುಮು ಚಳಿಯಲ್ಲಿ ಮದ್ಯ ಸೇವಿಸಿ ಕಿಕ್ ಜಾಸ್ತಿ ಮಾಡಿಕೊಳ್ಳುತ್ತಿದ್ದಾರೆ.ಪೊಲೀಸರು ಎಷ್ಟೆ ವಾರ್ನ್ ಮಾಡಿದರೂ ಕೆಲವು ಅಂಗಡಿ ಮುಂಗಟ್ಟಿನ ವ್ಯಾಪಾರ ಎಂದಿನಂತೆ ನಡೆಯುತ್ತಿದೆ. ವಾಹನ ಸಂಚಾರವಂತೂ ಕೇಳುವಂತೆ ಇಲ್ಲದಾಗಿದೆ. ಎಂದಿನಂತೆ ಆಟೋ,ಕಾರು ಸೇರಿದಂತೆ ಇತರೆ ವಾಹನಗಳ ಸಂಚಾರ ಸಹಜವಾಗಿದೆ.ಮೈಸೂರು ಮಾತ್ರವಲ್ಲದೆ ಚಾಮರಾಜನಗರ, ಕೊಡಗು ಜಿಲ್ಲೆಯಲ್ಲಿ ಕೂಡ ಇದೇ ಸ್ಥಿತಿ ಇದೆ. ಜನರು ಸರ್ಕಾರ ನೀಡಿದ ವಾರ್ನಿಂಗ್ ಗೆ ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.