ಮೈಸೂರು: ಆರೋಗ್ಯ ವೃದ್ಧಿಗೆ ಮೈಸೂರ್ ಪಾಕ್ ಸಹಕಾರಿ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಹೇಳಿದರು.
ಆಷಾಢ ಮಾಸದ ಪ್ರಯುಕ್ತ ಅಪೂರ್ವ ಸ್ನೇಹ ಬಳಗದಿಂದ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇಗುಲದ ಮುಂಭಾಗ ಪ್ರವಾಸಿಗರಿಗೆ ಹಾಗೂ ಭಕ್ತರಿಗೆ ಮೈಸೂರ್ ಪಾಕ್ ವಿತರಣೆ ಮತ್ತು ಮೈಸೂರ್ ಪಾಕ್ನ ಮಹತ್ವ ಹಾಗೂ ಅದರ ಇತಿಹಾಸವನ್ನು ಸಾರುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಿಹಿ ಸಂತೋಷದ ಸಂಕೇತ. ಆದರೆ ಆರೋಗ್ಯಕ್ಕೆ ಹಾನಿಕರ ಎಂದು ಭಾವಿಸಲಾಗುತ್ತಿದೆ. ಆದರೆ ಮೈಸೂರು ಪಾಕ್ ತಿಂದರೆ ಆರೋಗ್ಯವನ್ನು ವೃದ್ಧಿಸುತ್ತದೆ ಕಡ್ಲೆಹಿಟ್ಟು ಚರ್ಮದ ಕಾಯಿಲೆ ಗುಣ ಪಡಿಸುತ್ತದೆ. ಸಕ್ಕರೆಯಲ್ಲಿ ಆಮ್ಲ ಜನಕ ಹೆಚ್ಚಾಗಿದ್ದು ದೇಹದ ಶಕ್ತಿ ಹೆಚ್ಚಿಸುತ್ತದೆ. ತುಪ್ಪದ ಅಂಶದಿAದ ಮೂಳೆ ಸವೆತ ನಿವಾರಣೆಯಾಗುತ್ತದೆ. ಅದಕ್ಕಾಗಿಯೇ ಚಿಕ್ಕಮಕ್ಕಳಿಂದ ಹಿರಿಯ ನಾಗರಿಕರವರೆಗೆ ಮೈಸೂರ್ ಪಾಕ್ ತಿನ್ನಲು ಅಚ್ಚುಮೆಚ್ಚು. ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆಯಾಗಿ ಇರುವ ಮೈಸೂರು ಪಾಕ್ ಇಂದು ವಿಶ್ವಾದ್ಯಂತ ತನ್ನ ಹಿರಿಮೆ ಸಾರುತ್ತಿದೆ. ಹಾಗೆಯೇ ಪ್ರವಾಸೋದ್ಯಮ ಇಲಾಖೆ ಮೈಸೂರು ಪಾಕ್ ತಯಾರಿಸುವ ಅಡುಗೆ ಉದ್ಯಮವನ್ನು ಸೃಷ್ಟಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಹಿರಿಯ ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಮಾತನಾಡಿ ಮೈಸೂರು ಸಂಸ್ಥಾನದ ಪಾರಂಪರಿಕ ಸಿಹಿ ತಿನಿಸು ಮೈಸೂರ್ ಪಾಕ್ ಅದರ ಉಗಮವಾಗಿದ್ದು ಮೈಸೂರು ಅರಮನೆಯಲ್ಲಿ ಎಂಬುದು ಇನ್ನೂ ವಿಶೇಷ ಮೈಸೂರ್ ಪಾಕ್ ಈಗ ಮೈಸೂರು ಅಂಬಾಸಿಡರ್ ಎಂಬ ಖ್ಯಾತಿ ಹೊಂದಿದ್ದು ವಿಶ್ವ ವಿಖ್ಯಾತವಾಗಿದೆ. ದೈವದ ಆಷಾಡಮಾಸ ದೇವಿ ಆರಾಧನೆಗೆ ಹೇಳಿ ಮಾಡಿಸಿದ ಮಾಸ .ಈ ಮಾಸದಲ್ಲಿ ನಾಡದೇವಿಗೆ ಮೈಸೂರು ಪಾಕ್ ಅರ್ಪಿಸಿ ಭಕ್ತಾಧಿಗಳಿಗೆ ವಿತರಿಸಲಾಗಿದೆ ಎಂದರು.
ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್, ಕಡಕೊಳ ಜಗದೀಶ್, ಕೇಬಲ್ ಮಹೇಶ್, ಶಂಭು ಪಾಟೀಲ್, ಕೆಂಪಿ, ದುರ್ಗಾಪ್ರಸಾದ್, ರಾಕೇಶ್, ಎಸ್.ಎನ್.ರಾಜೇಶ್ ಸೇರಿದಂತೆ ಹಲವರು ಇದ್ದರು.