News Karnataka Kannada
Sunday, May 05 2024
ಮೈಸೂರು

ಸಿಎಂ ಅವರೇ ನಿಮ್ಮ ಪ್ರೀತಿ ಪಾತ್ರರಿಂದಲೇ ಶರತ್ ಮಾಡಿವಾಳ ಹತ್ಯೆಯಾಗಿದೆ: ಸಂಸದ ಪ್ರತಾಪ್ ಸಿಂಹ

Photo Credit :

ಸಿಎಂ ಅವರೇ ನಿಮ್ಮ ಪ್ರೀತಿ ಪಾತ್ರರಿಂದಲೇ ಶರತ್ ಮಾಡಿವಾಳ ಹತ್ಯೆಯಾಗಿದೆ: ಸಂಸದ ಪ್ರತಾಪ್ ಸಿಂಹ

ಮೈಸೂರು: ಮಂಗಳೂರಿನಲ್ಲಿ ಶರತ್ ಮಡಿವಾಳ್ ಅವರನ್ನ ಕೊಲೆ ಮಾಡಿರುವುದು ನಿಮ್ಮ ಪ್ರೀತಿ ಪಾತ್ರರೇ ಎಂಬುದೇ ನಿಮಗೆ ಗೊತ್ತಿದೆ, ಇಷ್ಟಾದರೂ ಎಚ್ಚರಿಕೆ ಕೊಡುವಾಗ ಹಿಂದುಗಳು ಎಂದು ಹೇಳುತ್ತೀರಿ ಆದರೆ ಮುಸ್ಲೀಮರು ಎಂಬ ಪದವನ್ನ ಬಳಕೆ ಮಾಡಲು ಏಕೆ ಹೆದರುತ್ತೀರಿ ಅವರ ಮೇಲೆ ಪ್ರೀತಿನಾ ಅಥವಾ ಓಟ್ ಬ್ಯಾಂಕ್ ತಪ್ಪಿಹೋಗುತ್ತದೆ ಎಂಬ ಭಯನಾ ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ಸಂಸದ ಪ್ರತಾಪ್ ಸಿಂಹ ಗಂಭೀರ ಆರೋಪ ಮಾಡಿದ್ದಾರೆ.

ಇಂದು ನಗರದಲ್ಲಿ ಸ್ವಚ್ಚ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಕೇಂದ್ರ ರಾಜ್ಯ ಸಚಿವೆ ನಿರ್ಮಾಲಾ ಸೀತರಾಮ್ ಜೊತೆ ಭಾಗವಹಿಸಿ ಮಾದ್ಯಮದವರ ಜೊತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಇತ್ತೀಚಿಗೆ ಮಂಗಳೂರಿನ ಬಂಟ್ವಾಳದಲ್ಲಿ ಶರತ್ ಮಡಿವಾಳ ಅವರ ಹತ್ಯೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಸದ ಪ್ರತಾಪ್ ಸಿಂಹ, ಆರು ಕೋಟಿ ಜನರಿಗೆ ನೀವೇ ಮುಖ್ಯಮಂತ್ರಿ, ಆದರೂ ಶರತ್ ಮಡಿವಾಳ್ ನಮ್ಮ ಕಾರ್ಯಕರ್ತ. ಈತನನ್ನ ನಿಮ್ಮ ಪ್ರೀತಿಪಾತ್ರರೇ ಹತ್ಯೆ ಮಾಡಿದ್ದಾರೆ ಎಂಬುದೇ ನಿಮಗೆ ಗೊತ್ತಿದೆ. ಆದರೆ ಅವರಿಗೆ ಎಚ್ಚರಿಕೆ ಕೊಡುವಾಗ ಹಿಂದುಗಳು ಎಂದು ಹೇಳುತ್ತಿರಾ ಆದರೆ ಮುಸ್ಲೀಮರು ಎಂಬ ಪದವನ್ನ ಬಳಕೆ ಮಾಡವುದಿಲ್ಲ. ಏಕೆ? ಅವರ ಮೇಲೆ ಪ್ರೀತಿಯೇ ಅಥವಾ ಓಟ್ ಬ್ಯಾಂಕ್ ಕೈತಪ್ಪುತ್ತದೆ ಎಂಬ ಭಯವೇ ಅಥವಾ ಕೊಲೆಗಡುಕರ ಮೇಲೆ ಪ್ರೀತಿಯೇ ಎಂದು ವಾಗ್ದಾಳಿ ನಡೆಸಿದ ಪ್ರತಾಪ್ ಸಿಂಹ ಸಿಎಂ ಸಿದ್ದರಾಮಯ್ಯನವರೇ ಸಂಘಟ ಪರಿವಾರ ಹಾಗೂ ಬಿಜೆಪಿ ಕಾರ್ಯಕರ್ತರನ್ನ ಹೆದರಿಸುವ ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಕಗ್ಗೊಲೆ ಮಾಡುವವರನ್ನ ಪ್ರೋತ್ಸಾಹಿಸುತ್ತಿದ್ದಾರೆ.

ಈಗಾಗಲೇ ಹೇಗೂ 4 ವರ್ಷ 2 ತಿಂಗಳು ಕಳೆದು ಹೋಗಿದೆ. ಉಳಿದ 10 ತಿಂಗಳನ್ನ ನೀವು ಮೈಸೂರು ಮಹಾರಾಜರ ಆಳಿದ ಸ್ಥಳದಿಂದ ಬಂದಿದ್ದೀರಾ ಕಾನೂನು ಸುವ್ಯವಸ್ಥೆಯನ್ನ ಕಾಪಾಡಿ, ಒಳ್ಳೆಯ ಆಡಳಿತವನ್ನಾದರೂ ನೀಡಿ ಏಕೆಂದರೆ ದೇಶದಲ್ಲಿ ಕರ್ನಾಟಕ ಶಾಂತಿ ಪ್ರೀಯ ರಾಜ್ಯವಾಗಿದ್ದು, ಇದರ ಹೆಸರನ್ನ ಉಳಿಸಿ ಇಲ್ಲದಿದ್ದರೆ ಹೊರಗಿನಿಂದ ಬಂಡವಾಳ ಹೂಡಲು ಯಾರು ಬರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು