ಮೈಸೂರು: ಕಾಡು ಪ್ರಾಣಿಯ ಬೇಟೆಗೆಂದು ಹಾಕಿದ ಉರುಲಿಗೆ ಚಿರತೆಯೊಂದು ಸಿಲುಕಿ ಮೃತಪಟ್ಟಿರುವ ಘಟನೆ ಪಿರಿಯಾಪಟ್ಟಣ ತಾಲ್ಲೂಕಿನ ಮೇಸ್ತ್ರಿ ಕಟ್ಟೆಯ ಬಳಿ ನಡೆದಿದೆ.
ಪಿರಿಯಾಪಟ್ಟಣ ತಾಲ್ಲೂಕಿನ ಮುತ್ತೂರು ಅರಣ್ಯ ಪ್ರದೇಶದ ಕಾಡಾಂಚಿನ ಗ್ರಾಮವಾದ ಕಾಡೇತಿಮ್ಮನಹಳ್ಳಿ ಗ್ರಾಮದ ಬಳಿ ಆನೆಗಳು ಗ್ರಾಮಕ್ಕೆ ಬರದಂತೆ ಕಂದಂಕ ನಿರ್ಮಾಣ ಮಾಡಲಾಗಿದ್ದು ಈ ಕಂದಕದೊಳಗೆ ಕಾಡು ಪ್ರಾಣಿಯ ಬೇಟಿಗಾಗಿ ದುಷ್ಕರ್ಮಿಗಳು ಉರುಲು ಹಾಕಿದ್ದು, ಆ ಉರುಲಿಗೆ ನಾಲ್ಕು ವರ್ಷದ ಗಂಡು ಚಿರತೆಯೊಂದು ಸಿಕ್ಕಿ ಮೃತಪಟ್ಟಿದೆ.
ಪ್ರತಿ ನಿತ್ಯ ಜಾನುವಾರುಗಳನ್ನು ಮೇಯಿಸಲು ತೆರಳುವ ಜನರು ಚಿರತೆಯನ್ನು ಕಂಡು ತಕ್ಷಣ ಅರಣ್ಯಾಧಿಕಾರಿಗಳಿಗೆ ವಿಚಾರ ತಿಳಿಸಿದಾಗ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕರಿಗಳು ಪರಿಶೀಲಿಸಿದಾಗ ಉರುಲಿಗೆ ಬಿದ್ದು ಚಿರತೆ ಸಾವ್ನಪ್ಪಿರುವುದು ಖಚಿತವಾಗಿದೆ. ಈ ಸಂಬಂಧ ಮೃತ ಚಿರತೆಯನ್ನು ಮರಣೋತ್ತರ ಪರೀಕ್ಷೆ ನಡೆಸಿ ಪ್ರಕರಣವನ್ನ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.